ಬೆಂಗಳೂರು: ಕರ್ನಾಟಕ ಬಂದ್ಗೆ ಚಿತ್ರರಂಗದ ಬೆಂಬಲ ನೀಡಿಲ್ಲ. ಗಾಂಧಿನಗರದ ಮುಖ್ಯ ಚಿತ್ರಮಂದಿರಗಳಲ್ಲಿ ಹತ್ತು ಗಂಟೆಯ ಪ್ರದರ್ಶನ ಎಂದಿನಂತೆ ನಡೆಯಲಿದೆ.
ಸಂತೋಷ್ ಹಾಗೂ ನರ್ತಕಿ ಚಿತ್ರಮಂದಿರಗಳು ತೆರೆದಿದ್ದು ಎಂದಿನಂತೆ ಪ್ರದರ್ಶನಕ್ಕೆ ಮುಂದಾಗಿವೆ. ಈ ನಡುವೆ ಮಲ್ಟಿಪ್ಲೆಕ್ಷ್ಗಳಲ್ಲಿಯು ಶೋ ನಡೆಯಲಿವೆ. ಇದಕ್ಕಾಗಿ ಬುಕ್ ಮೈ ಶೋನಲ್ಲಿ ಬುಕಿಂಗ್ಸ್ ಕೂಡ ನಡೆಯುತ್ತಿದೆ.
ಎಂದಿನಂತೆ ಎಲ್ಲ ಚಿತ್ರದ ಚಿತ್ರೀಕರಣಗಳು ನಡೆಯುತ್ತಿದ್ದು, ಬಂದ್ಗೆ ಬೆಂಬಲ ನೀಡಲ್ಲ ಎಂದು ಚಿತ್ರೋದ್ಯಮ ಪರೋಕ್ಷವಾಗಿ ಸಂದೇಶ ರವಾನಿಸಿದೆ. ಚಿತ್ರರಂಗದಿಂದ ಯಾವುದೇ ಕಾರ್ಯ ಚಟುವಟಿಕೆ ಸ್ಥಗಿತವಾಗಿಲ್ಲ.
ಸರೋಜಿನಿ ಮಹಿಷಿ ವರದಿ ಜಾರಿಗೆ ಚಿತ್ರರಂಗದಿಂದ ನೈತಿಕ ಬೆಂಬಲವಷ್ಟೇ ಸಿಕ್ಕಿದ್ದು, ಬಾಹ್ಯ ಬೆಂಬಲ ನೀಡಲಾಗಿಲ್ಲ.