ಸಿದ್ದಾಪುರ: ಬೆನ್ನೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಅವರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಅವರ ಮಗ ಫಕೀರ್ ಸಾಬ್ ಜು.13 ರಂದು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆನ್ನೂರು ಗ್ರಾಪಂನ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಇದನ್ನೂ ಓದಿ: ಸಮಗ್ರ ಕೃಷಿ ತಂದುಕೊಟ್ಟ ಲಾಭ
ಮತ ಪಡೆಯುವ ಉದ್ದೇಶದಿಂದ ನಮ್ಮ ತಾಯಿಯನ್ನು ಫೀರಮ್ಮ ಕಕ್ಕರಗೋಳ ಎಂಬುವರು ಬೇರೆಯವರ ಪ್ರಚೋದನೆಯಿಂದ ಅಪಹರಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.