More

    ಕನ್ನಡದ ಕಿರುತೆರೆ ನಟ ಸುಶೀಲ್​ ಗೌಡ ಆತ್ಮಹತ್ಯೆ!; ಸಾವಿಗೆ ಕಾರಣವಾಗಿದ್ದೇನು?

    ಕಿರುತೆರೆ ನಟ ಸುಶೀಲ್​ ಗೌಡ (30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ಇಂಡವಾಳ ಗ್ರಾಮದ ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
    ಮಂಡ್ಯದ ವಿವಿ ಬಡಾವಣೆ ನಿವಾಸಿಯಾಗಿರುವ ಸುಶೀಲ್​, ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ಇದೀಗ ಅವರ ಸಾವಿಗೆ ಧಾರಾವಾಹಿ ಬಳಗ ಕಂಬನಿ ಮಿಡಿದಿದೆ. ಜತೆಗೆ ಕಮರೊಟ್ಟು ಚೆಕ್​ಪೋಸ್ಟ್ ಸಿನಿಮಾದಲ್ಲಿಯೂ ನಟಿಸಿದ್ದರು.
    ಫಿಟ್​ನೆಸ್​ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುಶೀಲ್​, ಕಿರುತೆರೆ ಜತೆಗೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದರು. ಅದರಂತೆ, ದುನಿಯಾ ವಿಜಯ್​ ನಾಯಕತ್ವ ಮತ್ತು ನಿರ್ದೇಶನದ ‘ಸಲಗ’ ಚಿತ್ರದಲ್ಲಿಯೂ ಪೊಲೀಸ್​ ಪಾತ್ರ ನಿಭಾಯಿಸಿದ್ದರು.
    ಸದ್ಯ ಸುಶೀಲ್​ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ದುನಿಯಾ ವಿಜಯ್​ ಸಹ ಅಗಲಿದ ನಟನಿಗೆ ಕಂಬನಿ ಮಿಡಿದಿದ್ದಾರೆ. ಫೇಸ್​ಬುಕ್​ನಲ್ಲಿ ಆತನ ಬಗ್ಗೆ ಸುದೀರ್ಘವಾದ ಬರಹವೊಂದನ್ನು ಪೋಸ್ಟ್​ ಮಾಡಿದ್ದಾರೆ.

    ಶ್ರೀನಗರ ಕಿಟ್ಟಿ ‘ವೀರಂ’ ವೇಷ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts