ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ನ.25ರಂದು ನೇಪಾಳದ ಕಂಠ್ಮಡುವಿನ ಪಶುಪತಿ ದೇವಾಲಯದ ಬಳಿಯ ಆನಂದ ಪಶುಪತಿಯಲ್ಲಿ ‘ಅಂತಾರಾಷ್ಟ್ರೀಯ ಮಟ್ಟದ ಕನ್ನಡ ರಾಜ್ಯೋತ್ಸವ’ ಆಯೋಜಿಸಿದೆ.
ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಚಾಲನೆ ನೀಡಲಿದ್ದಾರೆ. ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಐಪಿಎಸ್ ಅಧಿಕಾರಿ ರೂಪ ಡಿ.ಮೌದ್ಗೀಲ್, ಗಾಯಕಿ ಅನುರಾಧ ಭಟ್, ಐಆರ್ಎಸ್ ಅಧಿಕಾರಿ ಜಯರಾಮ್ ರಾಯಪುರ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಪಾಲಿಕೆ ಉಪ ಆರೋಗ್ಯಾಧಿಕಾರಿ ಡಾ.ಎ.ಎಲ್.ಕಲಾವತಿ ದೇವಿ ಅವರನ್ನು ಸನ್ಮಾನಿಸಲಾಗುತ್ತದೆ.ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ.
ಇದನ್ನೂ ಓದಿ:ಜಾರಕಿಹೊಳಿ ಭದ್ರಕೋಟೆ ಸಡಿಲವಾಗಿ ಹೆಬ್ಬಾಳ್ಕರ್ ಮೇಲುಗೈ; ಮಾಜಿ ಸಚಿವರ ಭವಿಷ್ಯ !
ಕನ್ನಡವನ್ನು ಪಸರಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಒಂದೊಂದು ಸ್ಥಳಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ನೇಪಾಳದಲ್ಲಿ ಏರ್ಪಡಿಸಲಾಗಿದೆ.ಇಂಥ ಕಾರ್ಯಕ್ರಮಗಳಿಂದ ಕನ್ನಡ ಅಸ್ಮಿತೆ ಎತ್ತಿಹಿಡಿಯುವ ಜತೆಗೆ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಎ.ಅಮೃತ್ರಾಜ್.