More

    ‘ಸಂಜು’ ಚಿತ್ರದಲ್ಲಿ ಕಂಗನಾ ನಟಿಸಲ್ಲ ಎಂದು ಹೇಳಿದ್ಯಾಕೆ?

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸಂಜಯ್ ದತ್ ಬಯೋಪಿಕ್‌ನಲ್ಲಿ ಕಂಗನಾ ರಣಾವತ್ ನಟಿಸಬೇಕಿತ್ತಂತೆ. ಆದರೆ, ಆಕೆ ನೋ ಎಂದಿದ್ದಿಕ್ಕೆ ಆ ಅವಕಾಶ ಬೇರೆಯವರಿಗೆ ಹೋಗಿದೆ. ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಜಗತ್ತಿನಾದ್ಯಂತ 600 ಕೋಟಿ ರೂಪಾಯಿಗಳನ್ನ ಸಂಗ್ರಹಿಸಿದ್ದಾರೆ.

    ರಣಬೀರ್ ಕಪೂರ್‌ರಂತಹ ನಟ, ರಾಜಕುಮಾರ್ ಹಿರಾನಿಯಂಥ ಸೂಪರ್ ಹಿಟ್ ನಿರ್ದೇಶಕ, ವಿನೋದ್ ಚೋಪ್ರಾ ಪ್ರೊಡಕ್ಷನ್ಸ್‌ನಂಥ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ಜತೆಯಾಗಿ ಸಿನಿಮಾ ಮಾಡುವಾಗ, ಅದರಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಾಗ, ಯಾರಾದರೂ ಬೇಡ ಅಂದೋರುಂಟೆ?

    ಆದರೂ ಕಂಗನಾ ಚಿತ್ರಕ್ಕೆ ನೋ ಎಂದು ಹೇಳಿದ್ದಕ್ಕೆ ಅವರದ್ದೇ ಆದ ಕಾರಣ ಇದೆ. ಪ್ರಮುಖವಾಗಿ, ತಮ್ಮ ಪಾತ್ರ ಇಷ್ಟವಾಗಲಿಲ್ಲ ಮತ್ತು ಚಿತ್ರದಲ್ಲಿ ತಮಗೆ ಮಾಡುವುದಕ್ಕೆ ಏನೂ ಕೆಲಸ ಇರಲಿಲ್ಲ ಎಂಬ ಕಾರಣಕ್ಕೆ ಚಿತ್ರಕ್ಕೆ ನೋ ಎಂದರಂತೆ.

    ಈ ಕುರಿತು ಮಾತನಾಡಿರುವ ಅವರು, ‘ರಣಬೀರ್ ಕಪೂರ್ ನಮ್ಮ ಮನೆಗೆ ಬಂದಿದ್ದರು. ‘ಸಂಜು’ ಚಿತ್ರದಲ್ಲಿ ನಟಿಸುವ ಅವಕಾಶ ತಂದಿದ್ದರು. ನನಗೆ ಆ ಪಾತ್ರ ಇಷ್ಟವಾಗಲಿಲ್ಲ. ನನ್ನ ಪ್ರತಿಭೆ ತೋರಿಸುವುದಕ್ಕೆ ಅವಕಾಶವೇ ಇರಲಿಲ್ಲ. ಹಾಗಾಗಿ, ಅವರಿಗೆ ನೋ ಎಂದೆ. ಬೇರೆಯವರಾಗಿದ್ದರೆ, ಇಂಥದ್ದೊಂದು ಅವಕಾಶ ಸಿಗುತ್ತಿದ್ದಂತೆಯೇ ಎಸ್ ಎನ್ನುತ್ತಿದ್ದರು. ಆದರೆ, ನನ್ನ ನಂಬಿಕೆ ಏನೆಂದರೆ, ಇವತ್ತು ನಾನು ಈ ಸ್ಥಾನದಲ್ಲಿ ಇದ್ದೀನಿ ಎಂದರೆ, ನಾನು ಮಾಡಿದ ಚಿತ್ರಗಳಿಂದಲ್ಲ. ಬದಲಿಗೆ, ನಾನು ಮಾಡದೇ ಇರುವ ಚಿತ್ರಗಳಿಂದಾಗಿ ಮಾತ್ರ. ಒಂದು ಪಕ್ಷ ನಾನು ನನಗೆ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡಿದ್ದರೆ, ಇವತ್ತು ಈ ಸ್ಥಾನದಲ್ಲಿ ಇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಕಂಗನಾ.

    ಬರೀ ‘ಸಂಜು’ ಮಾತ್ರವಲ್ಲ, ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರದ ನಾಯಕಿಯಾಗುವುದಕ್ಕೂ ಅವರಿಗೆ ಅವಕಾಶ ಬಂದಿತ್ತಂತೆ. ಆದರೆ, ಕಂಗನಾ ಮಾತ್ರ ತಮ್ಮ ಪಾತ್ರದ ಬಗ್ಗೆ ಕೇಳಿ ಚಿತ್ರದಲ್ಲಿ ನಿರಾಕರಿಸಿದರಂತೆ. ಯಾವಾಗ ಕಂಗನಾ ನೋ ಎಂದರೋ, ಸಿಟ್ಟಾದ ನಿರ್ಮಾಪಕ ಆದಿತ್ಯ ಚೋಪ್ರಾ, ‘ಇನ್ನು ಮುಂದೆ ನಿನ್ನ ಜತೆ ಯಾವತ್ತೂ ಕೆಲಸ ಮಾಡಲ್ಲ’ ಎಂದರಂತೆ.
    ‘ಈ ತರಹದೆಲ್ಲಾ ಸಾಕಷ್ಟು ಅನುಭವಿಸಿದ್ದೇನೆ. ಈ ಬಗ್ಗೆ ನನಗೆ ಬೇಸರವೂ ಇಲ್ಲ’ ಎನ್ನುತ್ತಾರೆ ಕಂಗನಾ.

    ಅಭಿಮಾನಿಗಳು ಬಯಸಿದ್ದನ್ನು ನೀಡಲು ಮುಂದಾದ ರಾಬರ್ಟ್​ ಬಳಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts