More

    ಬುದ್ಧಿವಾದ ಹೇಳಿದ್ದಕ್ಕೆ ಹೆತ್ತವರನ್ನೇ ಕೊಂದ ಮಗ

    ಕನಕಗಿರಿ: ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ-ತಾಯಿ ಎನ್ನುವ ಮಾತಿದೆ. ಆದರೆ, ನೌಕರಿ ಮಾಡುವ ಜತೆ ಹೆಂಡತಿಯೊಂದಿಗೆ ಚೆನ್ನಾಗಿ ಬದುಕುವಂತೆ ಬುದ್ಧಿವಾದ ಹೇಳಿದ್ದಕ್ಕೆ ಪಾಲಕರನ್ನು ಹೆತ್ತ ಮಗನೇ ಧಾರುಣವಾಗಿ ಕೊಲೆ ಮಾಡಿದ್ದಾನೆ.

    ಪಟ್ಟಣದಲ್ಲಿ ಮಂಗಳವಾರ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಒಂಬತ್ತನೇ ವಾರ್ಡ್ ನಿವಾಸಿ ರಮೇಶ್ ಎಂಬಾತನೇ ಹೆತ್ತವರನ್ನು ಹತ್ಯೆಗೈದ ಪಾಪಿ ಮಗ. ಈತನ ತಂದೆ ಗಿರಿಯಪ್ಪ ಮಡಿವಾಳರ್ (66), ತಾಯಿ ಅಕ್ಕಮ್ಮ (60) ಮಗನ ಕೈಯಿಂದಲೇ ಅಂತ್ಯಕಂಡ ದುರ್ದೈವಿಗಳು. ದಂಪತಿಗೆ ಇರುವುದು ಒಬ್ಬನೇ ಮಗ. ಈತ ಕೆಲಸವಿದಲ್ಲದೇ ಕಳೆದ 15 ದಿನದಿಂದ ಮನೆಯಲ್ಲಿಯೇ ಇದ್ದ. ಹೆಂಡತಿಯೂ ಮನಸ್ತಾಪ ಮಾಡಿಕೊಂಡು ತವರಿಗೆ ಹೋಗಿದ್ದಾಳೆ.

    ಕೆಲ ದಿನಗಳ ಹಿಂದೆ ಮೆಡಿಕಲ್ ಕಂಪನಿಯಲ್ಲಿ ರಮೇಶ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿದ್ದ. ಕೆಲಸ ಮತ್ತು ಹೆಂಡತಿಯನ್ನು ಮರಳಿ ಕರೆಸುವ ವಿಚಾರದಲ್ಲಿ ಪಾಲಕರು ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ರಮೇಶ ಮಾನಸಿಕ ಖಿನ್ನತೆಗೂ ಒಳಗಾಗಿದ್ದ. ಮಂಗಳವಾರ ಬೆಳಗಿನ ಜಾವ ತಂದೆ-ತಾಯಿ ಜತೆಗೆ ಮತ್ತೆ ಜಗಳ ತೆಗೆದಿದ್ದಾನೆ. ಬೆಳಗ್ಗೆ 2.30ಕ್ಕೆ ಕಬ್ಬಿಣದ ಹಾರೆಯಿಂದ ಪಾಲಕರ ತಲೆಗೆ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.

    ಘಟನೆ ಕಂಡು ಇಡೀ ಪಟ್ಟಣವೇ ಬೆಚ್ಚಿಬಿದ್ದಿದೆ. ಇಳಿ ವಯಸ್ಸಿನಲ್ಲಿ ಮಗ ಮತ್ತು ಮೊಮ್ಮಕ್ಕಳೊಂದಿಗೆ ಜೀವನ ಕಳೆಯಬೇಕಿದ್ದ ಹಿರಿಯ ಜೀವಗಳು, ಪುತ್ರನಿಂದಲೆ ಹತ್ಯೆಗೀಡಾಗಿದ್ದಕ್ಕೆ ಜನರೆಲ್ಲ ಮಮ್ಮಲ ಮರುಗಿದರು. ಸಂಬಂಧಿಗಳ ರೋದನವೂ ನೋಡುಗರ ಕಣ್ಣಲ್ಲಿ ನೀರು ತರಿಸಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts