ನವದೆಹಲಿ: ದಕ್ಷಿಣ ಭಾರತದ ಸಿನಿಮಾಗಳ ಗೆಲುವಿನ ಬಗ್ಗೆ ಈಗಾಗಲೇ ಹಲವು ಪರ- ವಿರೋಧ ಚರ್ಚೆಗಳು ನಡೆದುಹೋಗಿವೆ. ಈಗ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಹೇಳಿಕೆ ಅಚ್ಚರಿ ವ್ಯಕ್ತವಾಗಿದೆ.
ದಕ್ಷಿಣದ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿವೆ. ಬಾಲಿವುಡ್ಅನ್ನು ಸೆಡ್ಡುಹೊಡೆದಿರುವ ಈ ಸಿನಿಮಾಗಳು ಹಿಂದಿ ಆವೃತ್ತಿಯಲ್ಲೂ ಭಾರೀ ಗಳಿಕೆಯನ್ನೇ ಕಾಣುತ್ತಿವೆ.
ದಕ್ಷಿಣ ಭಾರತ ಹಾಗೂ ಹಿಂದಿ ಸಿನಿಮಾ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೊಬ್ಬ ಭಾರತೀಯ, ನೀವೇನು? ತಾಜ್ಮಹಲ್ ನನ್ನದು, ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯ ಸಹ ನಿಮ್ಮದಾ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇತ್ತ ದಕ್ಷಿಣದ ಖ್ಯಾತ ನಟ ಕಮಲ್ ಹಾಸನ್ ಮಾತ್ರ, ಈ ಬಗ್ಗೆ ನೀರಸ ಪ್ರತಿಕ್ರಿಯೆ ನೀಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಂಬುದು ಈ ಮೊದಲೇ ಇತ್ತು, ಇದೇನು ಹೊಸದಲ್ಲ. ಕೆಜಿಎಫ್2 ಹಾಗೂ ಆರ್ಆರ್ಆರ್ ಸಿನಿಮಾಗಳು ಈಗಿನವು ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ನಟನೆಯ ಹೊಸ ಚಿತ್ರ ವಿಕ್ರಂ ಪ್ರಚಾರದ ವೇಳೆ ಮಾತನಾಡಿದ ಅವರು ಮಲಯಾಳಂನಲ್ಲಿ ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು. ಅವರೇನು ಬೇರೆ ಭಾಷೆಗಳಲ್ಲಿ ಡಬ್ ಮಾಡಲಿಲ್ಲ, ಆದರೂ ಅದು ಪ್ಯಾನ್ ಇಂಡಿಯಾ ಸಿನಿಮಾ ಎಂದೇ ಹೆಸರುಪಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಳ್ಳಲು ಉತ್ತಮ ಚಿತ್ರವಾಗಿರಬೇಕು ಅಷ್ಟೇ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ನಾವು ಯಾವತ್ತೂ ನೆಹರೂ ಅವರನ್ನು ಮೋದಿಯವರೊಂದಿಗೆ ಹೋಲಿಸಿಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು
ಹರಿಯಾಣ ಮಾಜಿ ಸಿಎಂಗೆ 4 ವರ್ಷ ಜೈಲು, 50 ಲಕ್ಷ ರೂ.ದಂಡ ವಿಧಿಸಿದ ವಿಶೇಷ ಕೋರ್ಟ್