More

    ಹೋಳಿ ದಿನವೇ ಬರ್ಬರ ಕೊಲೆ! ಜಿಲ್ಲಾಸ್ಪತ್ರೆಯ ಎದುರೇ ಶವವಾದ ಯುವಕ

    ಕಲಬುರಗಿ: ಭಾರತದಾದ್ಯಂತ ಇಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇದೇ ಶುಭ ದಿನದಂದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆಯ ಎದುರಿಗೇ ಕೊಲೆ ನಡೆದಿದ್ದು, ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ವೀರತಾ ಉಪಾಧ್ಯ(32) ಕೊಲೆಯಾದ ವ್ಯಕ್ತಿ. ಕೊಲೆ ನಡೆದ ಬೆನ್ನಲ್ಲೇ ನಗರದಲ್ಲಿ ರೌಡಿಗಳ ಅಟ್ಟಹಾಸ ಶುರುವಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ನೂರಾರು ಬೈಕ್, ಕಾರುಗಳನ್ನು ಜಖಂ ಮಾಡಲಾಗಿದೆ. ಮನೆಗಳಿಗೆ ನುಗ್ಗಿ ಅನೇಕರ ಮೇಲೆ ಹಲ್ಲೆ ಮಾಡಲಾಗಿದೆ. ಕೆಲ ಮನೆಗಳ ಬಾಗಿಲು ಮುರಿದಿರುವುದಾಗಿ ವರದಿಯಾಗಿದೆ. ಜಿಮ್ಸ್ ಆಸ್ಪತ್ರೆಗೆ ಕೂಡಾ ನುಗ್ಗಿ ಗಲಾಟೆ ಮಾಡಲಾಗಿದೆ.

    ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​ ನೀಡಲಾಗಿದೆ. ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಕರೊನಾ ಹೆಚ್ಚಾದರೆ ಶಾಲೆ-ಕಾಲೇಜು ಕ್ಲೋಸ್​? ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ

    ‘ಬಿಜೆಪಿಯವರಿಗೆ ಸೌಟು, ಪೊರಕೆಯೇ ಬುದ್ಧಿ ಕಲಿಸಲಿದೆ’ ಗೆದ್ದೇ ಗೆಲ್ತಾರಂತೆ ದೀದಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts