More

    ಗೆಲುವಿನತ್ತ ಖರ್ಗೆ ಅಜಯಸಿಂಗ್ ಡಾ.ಶರಣಪ್ರಕಾಶ, ಅಲ್ಲಮಪ್ರಭು

    ಕಲಬುರಗಿ : ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ.ಅಜಯಸಿಂಗ್ ಧರ್ಮಸಿಂಗ್ , ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್ ನ ಅಲ್ಲಮಪ್ರಭು ಪಾಟೀಲ್ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಮುನ್ನಡೆ ಸಾಧಿಸಿದ್ದು ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.

    -ಚಿಂಚೋಳಿ ಕ್ಷೇತ್ರದಲ್ಲಿ 7ನೇ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು ಬಿ.ಜೆ.ಪಿ-29177,ಕಾಂಗ್ರೆಸ್-26289, ಜೆ.ಡಿ.ಎಸ್-2531 ಪಡೆದಿದ್ದು
    ಬಿ.ಜೆ.ಪಿ. 2888 ಮತಗಳ‌ ಅಂತರದಿಂದ ಮುನ್ನಡೆ‌ ಸಾದಿಸಿದ್ದಾರೆ.

    -ಅಫಜಲಪೂರ ಕ್ಷೇತ್ರದಲ್ಲಿ
    8ನೇ ಸುತ್ತಿನ ಎಣಿಕೆ ಪೂರ್ಣಗೊಂಡಾಗ ಪಕ್ಷೇತರ-22440

    ಕಾಂಗ್ರೆಸ್-20017

    ಬಿ‌.ಜೆ.ಪಿ.-12777

    ಪಕ್ಷೇತರ ಅಭ್ಯರ್ಥಿ ನಿತೀಜ 2423 ಮತಗಳ‌ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.-

    ಚಿತ್ರಾಪುರ ಕ್ಷೇತ್ರದಲ್ಲಿ 13ನೇ ಸುತ್ತಿನ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್-61014, ಬಿ.ಜೆ.ಪಿ.-45562, ಕಾಂಗ್ರೆಸ್ 15452 ಮತಗಳ‌ ಅಂತರದಿಂದ ಮುನ್ನಡೆ‌ ಸಾಧಿಸಿದ್ದು ಗೆಲುವಿನ ಹಂತಕ್ಜೆ ಬಂದಿದ್ದಾರೆ. ಚಿತ್ತಾಪುರ ಹಾಗೂ ಜೇವರ್ಗಿ ಮತ್ತು ಸೇಡಂ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು ಮೂವರು ಗೆಲುವಾಗಿದೆ.‌ಅಧಿಕೃತ ಘೋಷಣೆ ಬಾಕಿ ಉಳಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts