ಹೈದರಾಬಾದ್: ಬಿಡುಗಡೆಯ ಹಂತದಲ್ಲಿರುವ ಆಚಾರ್ಯ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶಕ ಕೊರತಾಲ ಶಿವಾ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಇವರ ಅಭಿನಯದ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಚಿತ್ರ ನಿರ್ಮಾಣ ಆರಂಭಿಸಿತ್ತು. ಇದಕ್ಕಾಗಿ ಕೆಲ ದೃಶ್ಯಗಳಲ್ಲೂ ಕಾಜಲ್ ಅಭಿನಯಿಸಿದ್ದರು. ಸದ್ಯ ಅವರ ದೃಶ್ಯಗಳನ್ನು ತೆಗೆದುಹಾಕಿರುವುದಕ್ಕೆ ನಿರ್ದೇಶಕರು ಕಾರಣವನ್ನು ತಿಳಿಸಿದ್ದಾರೆ.
ಅದೇನೆಂದರೆ ಕಾಜಲ್ ಅಗರ್ವಾಲ್ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಹೀಗೆಂದು ಅವರೂ ಕೂಡ ಹೇಳಿದ್ದರು. ಹಾಗಾಗಿ ಅವರ ಅಭಿನಯದ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದಿದ್ದಾರೆ.
ಇನ್ನು ಈ ಪಾತ್ರಕ್ಕೆ ತ್ರಿಶಾ ಅವರನ್ನು ಮೊದಲು ಆಯ್ಕೆ ಮಾಡಲಾಗಿತ್ತು. ನಂತರ ಕಾಜಲ್ ಅವರನ್ನೇ ಅಂತಿಮಗೊಳಿಸಲಾಗಿತ್ತು. ಮದುವೆಯ ನಂತರವೂ ಕೆಲ ದಿನ ಕಾಜಲ್ ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.
ಇದೇ ಏಪ್ರಿಲ್ 29 ರಂದು ಚಿತ್ರ ಬಿಡುಗಡೆ ಸಜ್ಜಾಗಿದೆ. ಚಿತ್ರದಲ್ಲಿ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಒಟ್ಟಿಗೆ ಅಭಿನಯಿಸಿರುವುದರಿಂದ ಈ ಚಿತ್ರ ವಿಶೇಷವಾಗಿದ್ದು, ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.
ದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಕಟ್ಟಡದಲ್ಲಿ ಸಿಲುಕಿರುವ ಕಾರ್ಮಿಕರೆಷ್ಟು?