More

    ಆಚಾರ್ಯ ಚಿತ್ರದಲ್ಲಿ ಕಾಜಲ್​ ಅಗರ್​ವಾಲ್​ ನಟಿಸಿದ್ದ ದೃಶ್ಯಗಳಿಗೆ ಕತ್ತರಿ! ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?

    ಹೈದರಾಬಾದ್​: ಬಿಡುಗಡೆಯ ಹಂತದಲ್ಲಿರುವ ಆಚಾರ್ಯ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶಕ ಕೊರತಾಲ ಶಿವಾ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಕಾಜಲ್ ಅಗರ್​ ವಾಲ್​ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಇವರ ಅಭಿನಯದ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ.

    ಎರಡು ವರ್ಷಗಳ ಹಿಂದೆಯೇ ಚಿತ್ರ ನಿರ್ಮಾಣ ಆರಂಭಿಸಿತ್ತು. ಇದಕ್ಕಾಗಿ ಕೆಲ ದೃಶ್ಯಗಳಲ್ಲೂ ಕಾಜಲ್​ ಅಭಿನಯಿಸಿದ್ದರು. ಸದ್ಯ ಅವರ ದೃಶ್ಯಗಳನ್ನು ತೆಗೆದುಹಾಕಿರುವುದಕ್ಕೆ ನಿರ್ದೇಶಕರು ಕಾರಣವನ್ನು ತಿಳಿಸಿದ್ದಾರೆ.

    ಅದೇನೆಂದರೆ ಕಾಜಲ್​ ಅಗರ್​ವಾಲ್​ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಹೀಗೆಂದು ಅವರೂ ಕೂಡ ಹೇಳಿದ್ದರು. ಹಾಗಾಗಿ ಅವರ ಅಭಿನಯದ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದಿದ್ದಾರೆ.

    ಇನ್ನು ಈ ಪಾತ್ರಕ್ಕೆ ತ್ರಿಶಾ ಅವರನ್ನು ಮೊದಲು ಆಯ್ಕೆ ಮಾಡಲಾಗಿತ್ತು. ನಂತರ ಕಾಜಲ್​ ಅವರನ್ನೇ ಅಂತಿಮಗೊಳಿಸಲಾಗಿತ್ತು. ಮದುವೆಯ ನಂತರವೂ ಕೆಲ ದಿನ ಕಾಜಲ್​ ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು.

    ಇದೇ ಏಪ್ರಿಲ್​ 29 ರಂದು ಚಿತ್ರ ಬಿಡುಗಡೆ ಸಜ್ಜಾಗಿದೆ. ಚಿತ್ರದಲ್ಲಿ ಚಿರಂಜೀವಿ ಹಾಗೂ ಅವರ ಪುತ್ರ ರಾಮ್​ ಚರಣ್ ಒಟ್ಟಿಗೆ ಅಭಿನಯಿಸಿರುವುದರಿಂದ ಈ ಚಿತ್ರ ವಿಶೇಷವಾಗಿದ್ದು, ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.

    ಮಾಸ್ಕ್ ಕಡ್ಡಾಯ, ಸಿಎಂ ಸಭೆಯಲ್ಲಿ ತೀರ್ಮಾನ: ಸಚಿವ ಡಾ.ಕೆ.ಸುಧಾಕರ್

    ದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಕಟ್ಟಡದಲ್ಲಿ ಸಿಲುಕಿರುವ ಕಾರ್ಮಿಕರೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts