More

    ಅಂಗನವಾಡಿ, ಗ್ರಾಪಂಗಳಿಗೆ ಭೇಟಿ, ಪರಿಶೀಲನೆ

    ಕೆ.ಆರ್.ನಗರ: ತಾಲೂಕಿನ ಭೇರ್ಯ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೇಶ್ ಭೇಟಿ ನೀಡಿ ಪರಿಶೀಲಿಸಿದರು.
    ಬಟಿಗನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕಾರ್ಯಕರ್ತೆಯೇ ಇರಲಿಲ್ಲ. ಕೇಳಿದರೆ ರಜೆ ಮೇಲೆ ಇದ್ದಾರೆ ಎನ್ನುತ್ತಾರೆ. ಆದರೆ ಹಾಜರಾತಿ ಪುಸ್ತಕ ನೋಡಿದರೆ ಕಳೆದ ಮೂರು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ಬಂದಿಲ್ಲ. ಈ ಬಗ್ಗೆ ವಿವರಣೆ ಕೊಡಿ ಎಂದು ಈ ಭಾಗದ ಅಂಗನವಾಡಿ ಕೇಂದ್ರಗಳ ಮೇಲ್ವಚಾರಕಿ ಶೋಭಾ ಅವರಿಗೆ ಸೂಚಿಸಿದರು.
    ಹೊಸಅಗ್ರಹಾರದ ಅಂಗನವಾಡಿ ಕೇಂದ್ರ ಶುಚ್ಚಿತ್ವದಿಂದ ಕೂಡಿಲ್ಲ, ಮಕ್ಕಳ ಹಾಜರಾತಿಯನ್ನು ಪುಸ್ತಕದಲ್ಲಿ ಮೂರು ದಿನಗಳಿಂದ ನಮೂದಿಸಿಲ್ಲ. ಸರಿಯಾದ ಆಹಾರ ವಿತರಣೆಯಾಗಿಲ್ಲ. ಆಹಾರ ವಿತರಣೆ ಆಗದಿರುವ ಬಗ್ಗೆ ತಾ.ಪಂ. ಸಭೆಯಲ್ಲಿ ಅಧ್ಯಕ್ಷರು ಮತ್ತು ಇಒ ಅವರ ಗಮನಕ್ಕೆ ಏಕೆ ತಂದಿಲ್ಲ ಎಂದು ಜತೆಯಲ್ಲಿದ್ದ ಅಕ್ಕಮಹಾದೇವಿ ಅವರನ್ನು ತರಾಟೆ ತೆಗೆದುಕೊಂಡರು.
    ಭೇರ್ಯ ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿದ ಯೋಗೇಶ್ ಅವರಿಗೆ ಸಾರ್ವಜನಿಕರು ದೂರಿನ ಸುರಿಮಳೆಗೈದರು. ಗ್ರಾಪಂನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಪಂಚಾಯಿತಿಗೆ ಪಿಡಿಒ ಸರಿಯಾಗಿ ಬರುತ್ತಿಲ್ಲ. ಗ್ರಾ.ಪಂ. ಪಕ್ಕದಲ್ಲಿಯೇ ಕಸದ ರಾಶಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಇಒ ಅವರ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಯೋಗೇಶ್ ಭರವಸೆ ನೀಡಿದರು.
    ಬಳಿಕ ಹೊಸಅಗ್ರಹಾರ ಗ್ರಾಪಂಗೆ ಭೇಟಿ ನೀಡಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪ್ರದೀಪ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅಕ್ಕಮಹಾದೇವಿ, ಶೋಭಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts