More

    ಪ್ರೀತಿ, ವಿಶ್ವಾಸ ಹೆಚ್ಚಿಸುವ ಕ್ರೀಡೆ: ಶಾಸಕ ಈಶ್ವರಪ್ಪ

    ಶಿವಮೊಗ್ಗ: ಕ್ರೀಡೆಗಳು ಶಾರೀರಿಕ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮಾತ್ರವಲ್ಲ. ಪ್ರೀತಿ, ವಿಶ್ವಾಸವನ್ನೂ ಹೆಚ್ಚಿಸುತ್ತವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯಿಂದ ಭಾನುವಾರ ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
    ಪತ್ರಕರ್ತರದ್ದು ಕೇವಲ ವರದಿ ಮಾಡುವುದೇ ಕೆಲಸವಲ್ಲ. ಸ್ನೇಹ, ಶಾಂತಿಯನ್ನು ಹಂಚುವುದು ಕೂಡ ಒಂದು ಭಾಗವಾಗಿದೆ. ಪತ್ರಕರ್ತರ ನಡುವೆ ಸ್ಪರ್ಧೆ ಇದ್ದರೂ ಪರಸ್ಪರ ಪ್ರೀತಿ, ಪ್ರೇಮ, ವಿಶ್ವಾಸ ಬೆಳೆಸಬೇಕಿದೆ ಎಂದರು.
    ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಹಡಗೆವಾರು ಅವರು ಕೇವಲ ನಾಲ್ಕ ಹುಡುಗರನ್ನು ಇಟ್ಟುಕೊಂಡು ಆರಂಭಿಸಿದ ಆಟ(ಕಬಡ್ಡಿ) ಇಂದು ಇಡೀ ವಿಶ್ವವನ್ನೇ ಅಲ್ಲಾಡಿಸುವ ಮಟ್ಟದಲ್ಲಿ ಬೆಳೆದಿದೆ. ಇದೇ ರೀತಿಯಲ್ಲಿ ಪತ್ರಕರ್ತರ ಸಂಘಟನೆ ಕೂಡ ಬೆಳೆಯಲಿ ಎಂದು ಆಶಿಸಿದರು.
    ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಮಾತನಾಡಿ, ಪತ್ರಕರ್ತರು ತಮ್ಮ ದೈನಂದಿನ ಒತ್ತಡ ಮರೆತು ಸ್ನೇಹಮಯಿಯಾಗಿ ಇರುವುದು ಅಗತ್ಯವಾಗಿದೆ. ಅದಕ್ಕೆ ಕ್ರೀಡಾಕೂಟಗಳು ಸಹಕಾರಿ ಆಗಲಿವೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ಕಾರಣಾಂತರಗಳಿಂದ ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಕ್ರೀಡಕೂಟಗಳು ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಆಯೋಜಿಸಿದ ಎರಡು ದಿನಗಳ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.
    ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್, ವಿಶೇಷ ಆಹ್ವಾನಿತ ಪದ್ಮನಾಭ, ಉಪಾಧ್ಯಕ್ಷ ಹುಚ್ಚರಾಯಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ, ಗ್ರಾಮಾಂತರ ಕಾರ್ಯದರ್ಶಿ ದೀಪಕ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts