More

    ಕೆಲಸವಿಲ್ಲದ ಚಿಂತೆಯಿಂದ ಆತ್ಮಹತ್ಯೆ

    ಪಡುಬಿದ್ರಿ: ಉದ್ಯೋಗ ಕಳೆದುಕೊಂಡ ಚಿಂತೆಯಿಂದ ಮನನೊಂದಿದ್ದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಯ ನಿವಾಸಿ ಪುಷ್ಪರಾಜ್ (37) ಮನೆಯಲ್ಲಿ ನೇಣು ಬಿಗಿದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಕಂಪನಿ ಪುಷ್ಪ್ಪರಾಜ್ ಅವರನ್ನು ಕೆಲಸದಿಂದ ಕೈಬಿಟ್ಟಿತ್ತು ಎನ್ನಲಾಗಿದ್ದು, ಮನನೊಂದ ಅವರು ಮದ್ಯವ್ಯಸನಕ್ಕೆ ತುತ್ತಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts