ರಾಂಚಿ: ಬಡವರು ಕೇವಲ ಹತ್ತೇ ಹತ್ತು ರೂಪಾಯಿ ಕೊಟ್ರೆ ಸಾಕು. ಲುಂಗಿ, ಧೋತಿ ಮತ್ತು ಸೀರೆ ಕೊಡೋದಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗಾಗಿ ಈ ಯೋಜನೆಯನ್ನು ಅಂಗೀಕರಿಸಿರುವ ಸರ್ಕಾರ, ವರ್ಷಕ್ಕೆ ಎರಡು ಬಾರಿ ಈ ಕೊಡುಗೆ ನೀಡಲಿದೆ.
ಮುಖ್ಯಮಂತ್ರಿ ಹೇಮಂತ ಸೊರೇನ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಮತ್ತು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳು ಇದಕ್ಕೂ ಫಲಾನುಭವಿಗಳಾಗಿರುತ್ತಾರೆ.
ಇದನ್ನೂ ಓದಿ: ವೈದ್ಯರು ಮನೆಯಲ್ಲಿ ಪೂಜೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ, ಹರಕೆಯಂತೂ ಕಟ್ಟಿಕೊಳ್ತಾರೆ !
ಈ ಹಣಕಾಸು ವರ್ಷದಲ್ಲಿ ಒಂದು ಸಲ ಈ ಕೊಡುಗೆ ಕೊಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ತನ್ನ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಕೊಟ್ಟಿತ್ತು. ಅದು ಈಗ ಜಾರಿಗೊಳ್ಳುತ್ತಿದೆ. (ಏಜೆನ್ಸೀಸ್)