ಬೆಂಗಳೂರು: ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲರಿ ಮಳಿಗೆ ಮಾಲೀಕನಿಂದ 10 ಕೆ.ಜಿ. ಚಿನ್ನದ ಬಿಸ್ಕತ್ ಪಡೆದಿದ್ದ ಆಭರಣ ತಯಾರಕ, 4.5 ಕೆ.ಜಿ. ಚಿನ್ನದೊಂದಿಗೆ ಪರಾರಿಯಾಗಿದ್ದಾನೆ. ಆರ್ಎಂವಿ ಲೇಔಟ್ ನಿವಾಸಿ ಸುನೀಲ್ಕುಮಾರ್ ವಂಚನೆ ಗೊಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಸುರೇಶ್ ಆಚಾರಿ (37) ಎಂಬಾತನ ವಿರುದ್ಧ ಉಪ್ಪಾರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುನೀಲ್ಕುಮಾರ್ ಕಳೆದ 5 ವರ್ಷದಿಂದ ಗಾಂಧಿನಗರದ 5ನೇ ಕ್ರಾಸ್ನಲ್ಲಿ ಜ್ಯುವೆಲರಿ ಮಳಿಗೆ ಇಟ್ಟುಕೊಂಡಿದ್ದಾರೆ. ಅದೇ ಕಟ್ಟಡ ಕೊಠಡಿಯೊಂದರಲ್ಲಿ ಸುರೇಶ್ ಆಚಾರಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ. ಸುನೀಲ್ಗೆ ಸಂಬಂಧಿಸಿದ ಆಭರಣಗಳನ್ನು ಸುರೇಶ್ ತಯಾರಿಸಿಕೊಡುತ್ತಿದ್ದ. 2018ರಲ್ಲಿ ಏಕಾಏಕಿ ಅಂಗಡಿ ಮುಚ್ಚಿಕೊಂಡು ಹೋಗಿದ್ದ. ಇದೇ ಜನವರಿಯಲ್ಲಿ ಮರಳಿ ಬಂದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಗಡಿ ತೆರೆದಿರಲಿಲ್ಲ. ಇನ್ನು ಮುಂದೆ ಕೆಲಸ ಮಾಡುತ್ತೇನೆ ಎಂದಿದ್ದ.
ಇದನ್ನೂ ಓದಿ: ನ್ಯಾಯಾಲಯಗಳ ವಿರುದ್ಧ ವೃಥಾ ಟೀಕೆ ಅಕ್ಷಮ್ಯ
ಆತನ ಮಾತನ್ನು ನಂಬಿದ ಸುನೀಲ್, ಆಭರಣ ತಯಾರಿಸಿಕೊಡುವಂತೆ ಸೂಚಿಸಿ ಹಂತಹಂತವಾಗಿ 10 ಕೆ.ಜಿ. ಚಿನ್ನದ ಬಿಸ್ಕತ್ ಕೊಟ್ಟಿದ್ದರು. ಇದರಲ್ಲಿ 5.5 ಕೆಜಿ ಚಿನ್ನಾಭರಣ ತಯಾರಿಸಿಕೊಟ್ಟಿದ್ದ. ಉಳಿದ 4.5 ಕೆಜಿ ಚಿನ್ನದ ಬಿಸ್ಕತ್ನಲ್ಲಿ ಆಭರಣ ತಯಾರಿಸಿಕೊಟ್ಟಿರಲಿಲ್ಲ. ಇತ್ತೀಚೆಗೆ ಕರೆ ಮಾಡಿದಾಗ ಸುರೇಶ್ ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚಿಸಿರುವುದು ಗೊತ್ತಾಗಿ ದೂರು ಕೊಟ್ಟಿದ್ದಾರೆ.
ಆಪ್ತ ಸಲಹೆ: ಅತ್ತೆ-ಸೊಸೆ ಜಗಳದಲ್ಲಿ ಹೈರಾಣಾಗಿ ಹೋಗಿದ್ದೇನೆ, ದಯವಿಟ್ಟು ಪರಿಹಾರ ತಿಳಿಸಿ