More

    ಶ್ರೀನಗರದಲ್ಲಿ ಜೈಷ್​ ಉಗ್ರರ ಹಿತೈಷಿಗಳ ಸೆರೆ: ಉಗ್ರರಿಗೆ ಆಶ್ರಯ, ನೆರವು ನೀಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಪೊಲೀಸರು

    ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಉಪಟಳ ಇನ್ನೂ ನಿಂತಿಲ್ಲ.. ತೆರೆಮರೆಯಲ್ಲಿ ಭಯೋತ್ಪಾದಕರು ಸಂಚು ನಡೆಸುತ್ತಲೇ ಇದ್ದಾರೆ. ಜೈಷ್-ಇ-ಮೊಹಮದ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಮೂವರನ್ನು ಬುಧವಾರ ಜಮ್ಮು-ಕಾಶ್ಮೀರದ ಕೇಂದ್ರ ಬುಡ್ಗಾಮ್​ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಈ ಮೂವರ ಪೈಕಿ ಇಬ್ಬರನ್ನು ದಿಲವರ್ ಸೊಫಿ, ಸಮೀರ್ ಯೂಸಫ್ ಎಂದು ಗುರುತಿಸಲಾಗಿದ್ದು, ಚದೂರಾ ತೆಹಸಿಲ್​ ಮತ್ತು ಬುಡ್ಗಾಮ್​ ಜಿಲ್ಲೆಗೆ ಸೇರಿದವರಾಗಿದ್ದಾರೆ. ಮತ್ತೊಬ್ಬ ಅಪ್ರಾಪ್ತನಾಗಿರುವುದರಿಂದ ಆತನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

    ಇವರು ಭಯೋತ್ಪಾದನೆಗೆ ಸಹಕಾರ ಮತ್ತು ಜೆಇಎಮ್​ ಉಗ್ರರಿಗೆ ಆಶ್ರಯ ನೀಡಿದ್ದರು. ಹೀಗಾಗಿ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು,ಸಿಆರ್​ಪಿಎಫ್​ , ಭದ್ರತಾ ಪಡೆಗಳು ಉಗ್ರರ ಮೂವರು ಸಹಚರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಮನೆಯಲ್ಲಿ ಕೆಲವು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬ್ರೇಕಿಂಗ್ ನ್ಯೂಸ್​ ಕೊಟ್ಟ ಎಸ್​ಬಿಐ: ಬ್ಯಾಂಕು ಗ್ರಾಹಕರು ಖುಷಿಯಾಗೋದು ಗ್ಯಾರೆಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts