ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಲಿಯಾದ ನಾಲ್ವರು ಜೈಷ್ ಏ ಮೊಹಮ್ಮದ್ ಉಗ್ರರ ಕಾರ್ಯಚಟುವಟಿಕೆ ನಿರ್ವಹಿಸ್ತಾ ಇದ್ದುದು ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನ ಸಹೋದರ ಅಬ್ದುಲ್ ರೌಫ್ ಅಸ್ಗರ್ ಎಂಬ ಅಂಶ ಬೆಳಕಿಗೆ ಬಂದಿದೆ.
ಗಡಿ ನುಸುಳಿದ್ದು ಹೀಗೆ..
ಸಾಂಬಾ ಸೆಕ್ಟರ್ನಲ್ಲಿ ಗಡಿ ನುಸುಳುವುದಕ್ಕೆ ಉಗ್ರರು ನುಲ್ಲಾಹ್ಗಳ ನೆರವು ಪಡೆದುಕೊಂಡಿದ್ದಾರೆ. ಅವರು ಈ ಉಗ್ರರನ್ನು ಜಟ್ವಾಲ್ ಸಮೀಪ ಟ್ರಕ್ನಲ್ಲಿ ಹತ್ತಿಸಿಕೊಂಡಿದ್ದಾರೆ. ಜಮ್ಮುವಿನ ಕಥುವಾ ಕಡೆಯಿಂದ ಆರು ಕಿ.ಮೀ. ಅಂತರದಲ್ಲಿದೆ ಈ ಪ್ರದೇಶ. ನಸುಕಿನ 3 ರಿಂದ 4 ಗಂಟೆ ಸಮಯದಲ್ಲಿ ನುಸುಳುವಿಕೆ ನಡೆಯುತ್ತದೆ. ಬೆಳಗ್ಗೆ 4.45ರ ಸಮಯದಲ್ಲಿ ಟ್ರಕ್ ಬಾನ್ ಟೋಲ್ ಪ್ಲಾಜಾ ಬಳಿ ಬಂದಾಗ ಭದ್ರತಾ ಪಡೆ ಟ್ರಕ್ ಸುತ್ತುವರಿದಿದೆ. ಕೂಡಲೇ ಟ್ರಕ್ ಚಾಲಕ ಗಾಡಿ ಬಿಟ್ಟು ಪರಾರಿಯಾಗಿದ ಬೆನ್ನಿಗೆ ಕಾರ್ಯಾಚರಣೆ ನಡೆದಿದೆ.
ಅನುಷ್ಠಾನಗೊಳಿಸುವ ಮುನ್ನ ಬಹವಾಲ್ಪುರದಲ್ಲಿರುವ ಜೆಇಎಂ ಕೇಂದ್ರ ಕಚೇರಿಯಲ್ಲಿ ಸಭೆ ನಡೆದಿದೆ. ಅಲ್ಲಿ ಮೌಲಾನಾ ಅಬು ಜುಂದಾಲ್, ಮುಫ್ತಿ ತೌಸೀರ್ಫ್ ಮತ್ತು ಇನ್ನಿಬ್ಬರು ಹಿರಿಯ ಜೈಷ್ ಕಮಾಂಡರ್ಗಳು ಹಾಗೂ ಐಎಸ್ಐ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಶಂಕಿಸಲಾಗಿದೆ. ಇದಾಗಿ ಭಾರತದ ಗಡಿ ಭಾಗದಲ್ಲಿರುವ ಶಕರ್ಗಢ ಜೆಇಎಂ ಕ್ಯಾಂಪ್ನಲ್ಲಿ ಸಿದ್ಧರಾಗಿದ್ದ ಉಗ್ರರನ್ನು ಆಯ್ಕೆ ಮಾಡುವ ಕೆಲಸವನ್ನು ಅಸ್ಗರ್ ಮಾಡಿದ್ದು, ಭಾರತದೊಳಕ್ಕೆ ಕಳುಹಿಸುವ ಕೆಲಸವನ್ನು ಐಎಸ್ಐ ನೆರವೇರಿಸಿದೆ. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಇನ್ನೊಬ್ಬ ಉಗ್ರ ಖಾಝಿ ತರಾರ್ ಎಂಬಾತನು ಪಾಲ್ಗೊಂಡಿದ್ದ.
ಇದನ್ನೂ ಓದಿ : ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !
ಈ ಉಗ್ರರು ನವೆಂಬರ್ 18-19ರಂದು ಸಾಂಬಾ ಸೆಕ್ಟರ್ ಮೂಲಕ ಭಾರತದೊಳಕ್ಕೆ ನುಸುಳಿದ್ದರು. ಪುಲ್ವಾಮಾ ಉಗ್ರ ದಾಳಿಯಂತೆ ದೊಡ್ಡ ಪ್ರಮಾಣದಲ್ಲಿ ಉಗ್ರ ದಾಳಿ ಸಂಘಟಿಸುವ ಹೊಣೆ ಹೊತ್ತು ಅವರು ಭಾರತದೊಳಕ್ಕೆ ಪ್ರವೇಶಿಸಿದ್ದರು. ಅವರ ಕಾರ್ಯಚಟುವಟಿಕೆಗಳನ್ನು ಅಜರ್ನ ಸಹೋದರ ಅಬ್ದುಲ್ ಅಸ್ಗರ್ ನೋಡಿಕೊಳ್ತಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈ ಉಗ್ರರನ್ನು ಕೆಲಸಕ್ಕೆ ಸಾಕಷ್ಟು ತರಬೇತಿ ನೀಡಿ ನಿಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)