More

    ಜೈನಿ ಮುನಿ ಹತ್ಯೆ ಖಂಡಿಸಿ ಗದಗ ಜೈನ್​ ಸಮಾಜದ ಮೌನ ಮೆರವಣಿಗೆ

    ವಿಜಯವಾಣಿ ಸುದ್ದಿಜಾಲ ಗದಗ
    ಆಚಾರ್ಯ ಕಾಮಕುಮಾರನಂದಿ ಮುನಿ ಅವರ ಹತ್ಯೆಯನ್ನು ಖಂಡಿಸಿ ಗದಗ ಜಿಲ್ಲಾ ಜೈನ ಸಮಾಜ ಬುಧವಾರ ನಗರದಲ್ಲಿ ಬೃಹತ್​ ಮೌನ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿತು.
    ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಆಚಾರ್ಯ ಕಾಮಕುಮಾರನಂದಿ ಮುನಿಗಳ ಹತ್ಯೆ ಪ್ರಕರಣ ಹಿನ್ನೆಲೆ ನಗರದಲ್ಲಿ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ ಜಿಲ್ಲಾ ಜೈನ ಸಮುದಾಯ, ಪ್ರಜಾಪ್ರಭುತ್ವ ವ್ಯವಸ್ಥೆ ದಿಗ್​ಭ್ರಮೆಗೊಳಿಸಿದೆ. ರಾಜ್ಯದ ಜೈನ ಸಮಾಜವು ತೀವ್ರ ಆಘಾತಕ್ಕೊಳಗಾಗಿದೆ. ಟನೆಯನ್ನು ಸಕಲ ಜೈನ ಸಮುದಾಯ ಖಂಡಿಸಿದೆ. ತಪ್ಪಿತಸ್ಥರಿಗೆ ಶಿೆಯಾಗಬೇಕು, ಮುಂದೆ ಇಂತಹ ಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
    ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಮುದುಕಮ್ಮನವರ ಮನವಿಯನ್ನು ಮುಂದಿನ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ರವಾನಿಸುವದಾಗಿ ತಳಿಸಿದರು.
    ದಿಗಂಬರ ಜೈನ ಸಂದ ಅಧ್ಯ ಪಿ. ಎ. ಕುಲಕಣಿರ್, ಕಾರ್ಯದಶಿರ್ ಪ್ರಕಾಶ ಮುತ್ತಿನ,ಪಂಕಜ ಬಾಣಾ, ವಿಜಯ ಲೂಥಿಯಾ, ರೂಪಾಜಿ ಪಾಲರೇಚ, ಸುರೇಶಬಾಯಿ ಕೊಠಾರಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts