ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳು ಯಾರಿಗೆ ಹೆದರುತ್ತಾರೋ ಗೊತ್ತಿಲ್ಲ. ಆದರೆ, ಪಾಪರಾಜಿಗಳಿಗಂತೂ ಬಹಳ ಹೆದರುತ್ತಾರೆ. ಏಕೆಂದರೆ, ಸೆಲೆಬ್ರಿಟಿಗಳು ಎಲ್ಲಗೆ ಹೋದರಲ್ಲಿಗೆ ಫಾಲೋ ಅವರ ಫೋಟೋ ಮತ್ತು ವೀಡಿಯೋಗಳನ್ನು ಪಾಪರಾಜಿಗಳನ್ನು ತೆಗೆದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದರಿಂದ ಬಹಳಷ್ಟು ಸೆಲೆಬ್ರಿಟಿಗಳು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲೇ ಐದು ಹೊಸ ಬಾಲಿವುಡ್ ಚಿತ್ರಗಳ ನೇರ ಬಿಡುಗಡೆ …
ಈಗ್ಯಾಕೆ ಈ ಮಾತು ಎಂದರೆ, ಇತ್ತೀಚೆಗೆ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಮಗಳು ಜಾಹ್ನವಿ, ತನ್ನ ತಂಗಿ ಖುಷಿ ಮತ್ತು ಗೆಳೆಯನೊಬ್ಬನ ಜತೆಗೆ ಮುಂಬೈನಲ್ಲಿ ಸೈಕ್ಲಿಂಗ್ ಹೋಗಿದ್ದಾರೆ. ಅವರನ್ನು ಬೆನ್ನಟ್ಟಿದ ಪಾಪರಾಜಿಗಳು, ಅಡ್ಡಹಾಕಿ ಫೋಟೋ ತೆಗೆಯುವುದಕ್ಕೆ ಮುಂದಾಗಿದ್ದಾರೆ.
ಬೇರೆ ಸಮಯವಾಗಿದ್ದರೆ, ಖುಷಿ ನಿಂತು ಫೋಟೋಗೆ ಫೋಸ್ ಕೊಡುತ್ತಿದ್ದರೇನೋ? ಆದರೆ, ಅವರು ಹೋಗಿದ್ದು ಸೈಕಲ್ ಮಾಡಲಿಕ್ಕೆ. ಮೇಲಾಗಿ ರಸ್ತೆಗಳಲ್ಲಿ ಜನ ಬೇರೆ ಇದ್ದಾರೆ. ಮಾಸ್ಕ್ ಹಾಕಿದ್ದರೂ, ಒಂದು ಪಕ್ಷ ಗುರುತು ಹಿಡಿದುಬಿಟ್ಟರೆ, ಅವರಿಂದ ತಪ್ಪಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿಯೇ, ದಯವಿಟ್ಟು ಹಾ್ಗೆ ಮಾಡಬೇಡಿ, ಜಾಗ ಬಿಡಿ ಪ್ಲೀಸ್ ಎಂದು ಕೇಳಿಕೊಂಡು ಹೊರಟು ಹೋಗಿದ್ದಾರೆ. ಜಾಸ್ತಿ ದೂರ ಹೋಗದೆ. ವಾಪಸ್ಸು ಮನೆಗೆ ಹೋಗಿ ಗೇಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಮೈದಾನದಿಂದ 22 ಕೋಟಿ ನಷ್ಟ … ಮೂರನೇ ಬಾರಿಗೆ ಸೆಟ್ ನಿರ್ಮಾಣ
ಇದಕ್ಕೂ ಮುನ್ನ ನಟಿ ದೀಪಿಕಾ ಪಡುಕೋಣೆಯ ಹಿಂದೆ ಇದೇ ತರಹ ಪಾಪರಾಜಿಗಳು ಬೆನ್ನುಬಿದ್ದಿದ್ದರು. ಅವರು ಹೋದಲ್ಲಿ, ಬಂದಲ್ಲಿ ಹಿಂಬಾಲಿಸುತ್ತಿದ್ದರು. ಒಮ್ಮೆ ಹೀಗೆ ಆಗುತ್ತಿರುವಾಗ, ದೀಪಿಕಾ ಮಾರ್ಗಮಧ್ಯೆ ಕಾರು ನಿಲ್ಲಿಸುವುದಕ್ಕೆ ಹೇಳಿ, ರಸ್ತೆಯಲ್ಲಿ ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ನಂತರ ಪಾಪರಾಜಿಗಳು, ದೀಪಿಕಾ ಅವರನ್ನು ಬೆನ್ನಟ್ಟುವುದು ಸ್ವಲ್ಪ ಕಡಿಮೆಯಾಯಿತು.