More

    ಕೀಳುಮಟ್ಟದ ಹೇಳಿಕೆ ನೀಡುವ ಸಂಸ್ಕೃತಿ ನನ್ನದಲ್ಲ: ಶಾಸಕ ರಾಮಚಂದ್ರ ಅವರಿಗೆ ರಾಜೇಶ್ ತಿರುಗೇಟು

    ಜಗಳೂರು: ಶಾಸಕರ ವೈಯಕ್ತಿಕ ಜೀವನದ ಬಗ್ಗೆ ನಾನು ಕೀಳಾಗಿ ಎಲ್ಲೂ ಹೇಳಿಕೆ ನೀಡಿಲ್ಲ. ಆಡಿಯೋ, ವಿಡಿಯೋ ಸಿಡಿಗಳಿವೆ ಎಂದು ನನ್ನ ವಿರುದ್ಧ ಆರೋಪ ಮಾಡುವ ಮೊದಲು ಬಿಡುಗಡೆಗೊಳಿಸಿ, ಕ್ಷೇತ್ರದ ಮತದಾರರಿಗೆ ಸತ್ಯಾಸತ್ಯತೆ ತಿಳಿಯಲಿ ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ಶಾಸಕರಿಗೆ ತಿರುಗೇಟು ನೀಡಿದರು.

    ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕೆಲಸಕ್ಕೂ ಶಾಸಕರು ಹೆಚ್ಚು ಪ್ರಚಾರ ಬಯಸುತ್ತಾರೆ. ಸುಳ್ಳು ಹೇಳಿ ಜನರನ್ನು ಮೋಡಿ ಮಾಡುತ್ತಾರೆ, ಪರ್ಸೆಂಟೇಜ್ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದೇನೆ. ಆದರೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ತಲೆ ಹಾಕುವುದಿಲ್ಲ. ಕೀಳಾಗಿ ಮಾತನಾಡುವ ಜಾಯಮಾನ ನನ್ನದಲ್ಲ ಎಂದರು.

    ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಜನರ ಸಂಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಐಷಾರಾಮಿ ಜೀವನ ನಡೆಸಿಲ್ಲ. ನನ್ನ ಮಗನ ವಿದ್ಯಾಭ್ಯಾಸದ ಕಾರಣಕ್ಕೆ ದಾವಣಗೆರೆಯ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಇದ್ದೇನೆ. ಬೇರೆಯವರ ಮಾತು ಕೇಳಿ ಬಾಯಿಗೆ ಬಂದಂತೆ ಹೇಳಿಕೆ ನೀಡಬೇಡಿ ಎಂದು ಎಚ್ಚರಿಸಿದರು.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ದಾಖಲೆ ಸಹಿತ ತಂದು ಜನತೆಯ ಮುಂದಿಡುತ್ತೇನೆ ಎಂದರು.

    ಸಿದ್ದು ಜನ್ಮದಿನಕ್ಕೆ ದಾವಣಗೆರೆಯಲ್ಲಿ ಸಿಹಿ ತಿನಿಸು ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts