ಜಗಳೂರು: ಜಮೀನಿನಲ್ಲಿ ನಾಟಿ ಮಾಡಲಾಗಿದ್ದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿ ವಿಕೃತಿ ಮೆರೆದಿರುವ ಘಟನೆ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಎಸ್.ಬಿ. ಪ್ರದೀಪ್ ಅವರು ಗ್ರಾಮದ ಹೊರವಲಯದ 4 ಎಕರೆ ಜಮೀನಿನಲ್ಲಿ ಕಳೆದ 25 ದಿನಗಳ ಹಿಂದೆ ಸಸಿ ನಾಟಿ ಮಾಡಿದ್ದರು.
ನಾಟಿ ಮಾಡಿದ ಸಸಿಗಳಲ್ಲಿ ಅಂದಾಜು 30ಕ್ಕೂ ಹೆಚ್ಚು ಸಸಿಗಳನ್ನು ರಾತ್ರೋರಾತ್ರಿ ಕಿತ್ತು ಹಾಕಿದ್ದಾರೆ. ಜಮೀನು ಮಾಲೀಕ ನೀಡಿದ ದೂರಿನ ಮೇರೆಗೆ ಜಗಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.