More

    ಬಿಸಿಸಿಐ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್-ಸೆಹ್ವಾಗ್ ಪುತ್ರರ ಮುಖಾಮುಖಿ

    ವಿಜಯವಾಡ: ಟೀಮ್ ಇಂಡಿಯಾ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಹಾಗೂ ಮಾಜಿ ಸ್ಫೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಮುಖಾಮುಖಿಗೆ ಬಿಸಿಸಿಐ ಟೂರ್ನಿ ಸಾಕ್ಷಿಯಾಯಿತು.
    ಸೋಮವಾರ ಆರಂಭಗೊಂಡ 16 ವಯೋಮಿತಿಯ ವಿಜಯ್ ಮರ್ಚೆಂಟ್ ಟ್ರೋಫಿಯ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ ಹಾಗೂ ದೆಹಲಿ ತಂಡಗಳು ಎದುರಾಗಿವೆ. ಒಂದೆಡೆತಂದೆ ದ್ರಾವಿಡ್ ಅವರಂತೆ ವಿಕೆಟ್ ಕೀಪರ್ ಆಗಿರುವ ಅನ್ವಯ್ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ ಆರ್ಯವೀರ್ ದೆಹಲಿ ತಂಡದ ಆರಂಭಿಕ ಬ್ಯಾಟರ್. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 144 ರನ್‌ಗಳಿಗೆ ಆಲೌಟ್ ಆಗಿದ್ದು, ಅನ್ವಯ್ ದ್ರಾವಿಡ್ ಡಕೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ದೆಹಲಿ ಪರ ಹೋರಾಟ ನಡೆಸುತ್ತಿರುವ ಆರ್ಯವೀರ್ ಸೆಹ್ವಾಗ್ (50*) ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದಾರೆ. ದಿನದಂತ್ಯಕ್ಕೆ ದೆಹಲಿ 1 ವಿಕೆಟ್‌ಗೆ 107 ರನ್‌ಗಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts