ಕಾಬೂಲ್: ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಪ್ರವಾದಿ ಮೊಹಮ್ಮದ್ ಅವರಿಗೆ ಮಾಡಿದ ಅವಮಾನಕ್ಕೆ ಪ್ರತಿಕಾರ ಎಂದು ಹೇಳಿಕೊಂಡಿದೆ.
ಶನಿವಾರ ಬೆಳಗ್ಗೆ ಗುರುದ್ವಾರದ ಮೇಲೆ ದಾಳಿ ನಡೆದಿತ್ತು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಭಾನುವಾರ ತನ್ನ ಅಮಾಕ್ ಪ್ರಚಾರ ತಾಣದಲ್ಲಿ ಪೋಸ್ಟ್ ಮಾಡಿರುವ ಐಸಿಸ್ ತಾನೇ ದಾಳಿ ನಡೆಸಿದ್ದಾಗಿ ಹೇಳಿದೆ.
ಸಿಖ್ ಹಾಗೂ ಹಿಂದು ದೇವಾಲಯವನ್ನು ಗುರಿಯಾಗಿರಿಸಿಕೊಂಡಿದ್ದ ಐಸಿಸ್, ಕಾಬೂಲಿನ ಗುರುದ್ವಾರದ ಮೇಲೆ ಬಾಂಬ್ ದಾಳಿ ನಡೆಸಿದ್ದಲ್ಲದೇ, ಒಳ ಪ್ರವೇಶಿಸಿ ಗುಂಡಿನ ದಾಳಿಯನ್ನು ನಡೆಸಿತ್ತು. ಈ ನಡುವೆ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದಲ್ಲದೇ, ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿತ್ತು. (ಏಜೆನ್ಸೀಸ್)
ನೀರಲ್ಲಿ ಕೊಚ್ಚಿಹೋಯ್ತು ಬದುಕು, ವಾರದಿಂದ ಮುಂದುವರಿದ ಪ್ರವಾಹಕ್ಕೆ ಮೂರು ರಾಜ್ಯಗಳ ಜನರು ತತ್ತರ
ಅಗ್ನಿಪಥ ಯೋಜನೆ ವಿರೋಧಿಸುವವರು ಮೂರ್ಖರು: ಕಾಂಗ್ರೆಸ್ ವಿರುದ್ಧ ಸಚಿವ ಎ.ನಾರಾಯಣಸ್ವಾಮಿ ಕಿಡಿ