More

    ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡಿದ್ದೆ!; ಗುಟ್ಟು ಬಿಚ್ಚಿಟ್ಟ ರವಿ ಚೆನ್ನಣ್ಣನವರ್

    ಬೆಂಗಳೂರು: ಐಪಿಎಸ್ ಅಧಿಕಾರಿ ರವಿ. ಡಿ. ಚೆನ್ನಣ್ಣನವರ್ ಖಡಕ್ ಪೊಲೀಸ್ ಅಧಿಕಾರಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈಕ್ ಹಿಡಿದು ನಿಂತರೆ ಅವರ ಮಾತುಗಳನ್ನು ಕೇಳುವುದೇ ಚೆಂದ. ಅವರ ಬಾಯಲ್ಲಿ ಹೊರಡುವ ಪ್ರತೀ ಮಾತೂ ಸಹ ಇತರರಿಗೆ ಜೀವನಸ್ಪೂರ್ತಿ ಮೂಡಿಸುವಂಥವು. ಇದೀಗ ಎಲ್ಲಿಯೂ ಹೇಳಿಕೊಳ್ಳದ ಗುಟ್ಟೊಂದನ್ನು ಹೇಳಿಕೊಂಡಿದ್ದಾರವರು. ಅದಕ್ಕೆ ‘ದಿಲ್ ಪಸಂದ್’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ವೇದಿಕೆ ಕಲ್ಪಿಸಿತ್ತು. ‘ಒಬ್ಬ ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆ ಆದರೆ, ಸಾಮ್ರಾಜ್ಯವನ್ನೇ ನಿರ್ವಿುಸಬಹುದು ಎಂಬುದನ್ನು ‘ಮಯೂರ’ ಸಿನಿಮಾ ನೋಡಿ ಕಲಿತೆ. ಅಲ್ಲಿಂದ ಸಿನಿಮಾ ನನ್ನ ಮೇಲೆ ಗಾಢ ಪರಿಣಾಮವನ್ನೇ ಬೀರಿತು.

    ನಾನು ಪಿಯುಸಿ ಓದುವ ಸಂದರ್ಭದಲ್ಲಿ ಗದಗನಲ್ಲಿ ಬ್ಲ್ಯಾಕ್​ ಟಿಕೆಟ್ ಮಾರಿದ್ದೇನೆ. ಈ ವಿಚಾರವನ್ನು ಇದೇ ಮೊದಲ ಬಾರಿಗೆ ಹೇಳಿಕೊಳ್ಳುತ್ತಿದ್ದೇನೆ. ಮಹಾಲಕ್ಷ್ಮೀ, ಶಾಂತಿ, ಕರ್ನಾಟಕ ಥಿಯೇಟರ್​ಗಳಲ್ಲಿ ಬ್ಲಾ್ಯಕ್ ಟಿಕೆಟ್ ಮಾರಾಟ ಮಾಡಿದ್ದೆ. ‘ಅಸುರ’, ‘ಯಜಮಾನ’, ‘ದಿಲ್ ಕಾ ರಿಷ್ತಾ’, ‘ಅಂಜಲಿ ಗೀತಾಂಜಲಿ’ ಮುಂತಾದ ಚಿತ್ರಗಳ ಟಿಕೆಟ್ ಮಾರಿದ್ದೇನೆ. ಹಾಗಾಗಿ ನನಗೂ ಸಿನಿಮಾ ನಂಟಿದೆ’ ಎನ್ನುವ ಅವರು, ನಾಟಕರಂಗದಲ್ಲಿಯೂ ಸಕ್ರಿಯರಾಗಿದ್ದರು. ‘ಇತ್ತೀಚೆಗೆ ಬರವಣಿಗೆ ಸಹ ಆರಂಭಿಸಿದ್ದೇನೆ. ಇದುವರೆಗೂ ಹೇಳಿಕೊಳ್ಳದ ಕಥೆಗಳನ್ನು ಬರೆದಿದ್ದೇನೆ. ಬರೆದ ಪುಸ್ತಕ ಓದುತ್ತಾರೋ ಇಲ್ಲವೋ, ಆದರೆ ಸಿನಿಮಾ ನೋಡುತ್ತಾರೆ. ಮಹಾನ್ ವ್ಯಕ್ತಿ ಹೇಳಿದ ಮಾತನ್ನು ನೆನಪಿಟ್ಟುಕೊಳ್ಳದೆ ಇರಬಹುದು, ಸಿನಿಮಾ ಡೈಲಾಗ್ ನೆನಪಿಟ್ಟುಕೊಳ್ಳುತ್ತಾರೆ. ಇಂಥ ಒಂದು ಮಾಧ್ಯಮದಿಂದ ಒಳ್ಳೆಯ ವಿಷಯ ವಿಚಾರಗಳು ಹೊರಬರಲಿ ಎಂಬುದು ನನ್ನ ಹಾರೈಕೆ’ ಎಂದರು.

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಬಿತ್ತನೆ ಬೀಜ ಪಡೆಯಲು ಬಂದಿದ್ದ ರೈತ ಮಹಿಳೆಯನ್ನು ತಳ್ಳಿ ಬೀಳಿಸಿದ ಲೇಡಿ ಎಸ್​ಐ; ಪೊಲೀಸ್ ದರ್ಪದ ವಿರುದ್ಧ ಸಾರ್ವಜನಿಕರ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts