ರಾಯಚೂರು: ನಿನ್ನೆ (ಡಿ. 23) ಕೇರಳದ ಕೊಚ್ಚಿಯಲ್ಲಿ ನಡೆದ 2023ನೇ ಸಾಲಿನ ಮಿನಿ ಐಪಿಎಲ್ ಹರಾಜಿನಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಮನೋಜ್ ಭಾಂಡಗೆ ಆಯ್ಕೆಯಾಗಿದ್ದಾರೆ.
ಮನೋಜ್ ಅವರನ್ನು 20 ಲಕ್ಷ ರೂ.ಗಳಿಗೆ ಆರ್ಸಿಬಿ ತಂಡ ಖರೀದಿಸಿದೆ. ಇದರ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಮನೋಜ್ ಅವರ ಅಭಿಮಾನಿಗಳು ಸಿಂಧನೂರಿನಲ್ಲಿ ಬೈಕ್ ರ್ಯಾಲಿ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.
ಸಿಂಧನೂರಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕೆಪಿಎಲ್, ಮಹಾರಾಜ ಟ್ರೋಫಿ, ಮುಸ್ತಕ್ ಅಲಿ ಟ್ರೋಫಿಯಲ್ಲಿ ಮನೋಜ್ ಉತ್ತಮ ಪ್ರದರ್ಶನ ನೀಡಿದ್ದರು.
ಆಲ್ರೌಂಡರ್ ಆಟಗಾರನಾಗಿರುವ ಮನೋಜ್, 16 ಮತ್ತು 19 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿ ಎಂಬುದು ಮನೋಜ್ ಅವರ ಅಭಿಮಾನಿಗಳ ಆಶಯವಾಗಿದೆ. (ಏಜೆನ್ಸೀಸ್)
ಅಮೆರಿಕ ಮೂಲದ ಪಾಕ್ ನಟನನ್ನು ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ: ಇಬ್ಬರಿಗೂ ಇದು 3ನೇ ವಿವಾಹ!
ತಿರುಪತಿಯಿಂದ ಹಿಂದಿರುಗುವಾಗ ರಾಮನಗರದ ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು, ಕೆಲವರ ಸ್ಥಿತಿ ಗಂಭೀರ