More

    ದೆಹಲಿ ಪೊಲೀಸ್​ನ ನೂತನ ಆಯುಕ್ತರಾಗಿ ಎಸ್​ಎನ್​ ಶ್ರೀವಾಸ್ತವ್​ ಆಯ್ಕೆ: ಶನಿವಾರದಂದು ಅಮೂಲ್ಯ ಪಟ್ನಾಯಕ್​ ನಿವೃತ್ತಿ

    ನವದೆಹಲಿ: ಇಲ್ಲಿನ ಪೊಲೀಸ್​ ಇಲಾಖೆಯ ಆಯುಕ್ತರಾಗಿರುವ ಅಮೂಲ್ಯ ಪಟ್ನಾಯಕ್​ ಅವರು ಶನಿವಾರದಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಎಸ್​ಎನ್​.ಶ್ರೀವಾಸ್ತವ್​ ಅವರನ್ನು ನೂತನ ಆಯುಕ್ತರಾಗಿ ಆಯ್ಕೆ ಮಾಡಲಾಗಿದ್ದು ಭಾನುವಾರದಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

    ಐಪಿಎಸ್​ ಆಫೀಸರ್​ ಆಗಿರುವ ಎಸ್​ಎನ್​ ಶ್ರೀವಾಸ್ತವ್​ ಅವರನ್ನು ದೆಹಲಿಗೆ ವಿಶೇಷ ಪೊಲೀಸ್​ ಆಯುಕ್ತರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಅಮೂಲ್ಯ ಪಟ್ನಾಯಕ್​ ಅವರು ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ಶ್ರೀವಾಸ್ತವರ್​ ಅವರನ್ನು ನೇಮಕ ಮಾಡಲಾಗುತ್ತಿದೆ.

    ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್​ ಆಯುಕ್ತರಾಗಿ ಶ್ರೀವಾಸ್ತವ್​ ಅವರನ್ನು ಕೇಂದ್ರ ಗೃಹ ಸಚಿವಾಲಯ ಆಯ್ಕೆ ಮಾಡಿದೆ.

    ಎಸ್​ಎನ್​ ಶ್ರೀವಾಸ್ತವ್​ ಅವರು 1985ರ ಅರುಣಾಚಲ್​ ಪ್ರದೇಶ-ಗೋವಾ-ಮಿಜೋರಾಂನ ಬ್ಯಾಚ್​ಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರಾಡಳಿತ ಪ್ರದೇಶದ ಕೇಡರ್​ ಅಧಿಕಾರಿಯಾಗಿಯೂ ಸೇವ ಸಲ್ಲಿಸಿದ್ದಾರೆ. ಸಿಪಿಆರ್​ಎಫ್​ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ಇವರು ದೆಹಲಿಯಲ್ಲಿ ಅನೇಕ ಪೊಲೀಸ್​ ಯುನಿಟ್​ಗಳ ಜತೆ ಕಾರ್ಯಾಚರಣೆ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts