ನವದೆಹಲಿ: ಇಲ್ಲಿನ ಪೊಲೀಸ್ ಇಲಾಖೆಯ ಆಯುಕ್ತರಾಗಿರುವ ಅಮೂಲ್ಯ ಪಟ್ನಾಯಕ್ ಅವರು ಶನಿವಾರದಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆ ಎಸ್ಎನ್.ಶ್ರೀವಾಸ್ತವ್ ಅವರನ್ನು ನೂತನ ಆಯುಕ್ತರಾಗಿ ಆಯ್ಕೆ ಮಾಡಲಾಗಿದ್ದು ಭಾನುವಾರದಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಐಪಿಎಸ್ ಆಫೀಸರ್ ಆಗಿರುವ ಎಸ್ಎನ್ ಶ್ರೀವಾಸ್ತವ್ ಅವರನ್ನು ದೆಹಲಿಗೆ ವಿಶೇಷ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಅಮೂಲ್ಯ ಪಟ್ನಾಯಕ್ ಅವರು ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ಶ್ರೀವಾಸ್ತವರ್ ಅವರನ್ನು ನೇಮಕ ಮಾಡಲಾಗುತ್ತಿದೆ.
ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್ ಆಯುಕ್ತರಾಗಿ ಶ್ರೀವಾಸ್ತವ್ ಅವರನ್ನು ಕೇಂದ್ರ ಗೃಹ ಸಚಿವಾಲಯ ಆಯ್ಕೆ ಮಾಡಿದೆ.
ಎಸ್ಎನ್ ಶ್ರೀವಾಸ್ತವ್ ಅವರು 1985ರ ಅರುಣಾಚಲ್ ಪ್ರದೇಶ-ಗೋವಾ-ಮಿಜೋರಾಂನ ಬ್ಯಾಚ್ಗಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರಾಡಳಿತ ಪ್ರದೇಶದ ಕೇಡರ್ ಅಧಿಕಾರಿಯಾಗಿಯೂ ಸೇವ ಸಲ್ಲಿಸಿದ್ದಾರೆ. ಸಿಪಿಆರ್ಎಫ್ನಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿರುವ ಇವರು ದೆಹಲಿಯಲ್ಲಿ ಅನೇಕ ಪೊಲೀಸ್ ಯುನಿಟ್ಗಳ ಜತೆ ಕಾರ್ಯಾಚರಣೆ ಮಾಡಿದ್ದಾರೆ. (ಏಜೆನ್ಸೀಸ್)