More

    ವರುಣನ ಆರ್ಭಟ; ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟ-20 ಪಂದ್ಯ ರದ್ದು

    ಡರ್ಬನ್​: ಸೂರ್ಯಕುಮಾರ್​ ಯಾದವ್​ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾದ ಡರ್ಬನ್​ನಲ್ಲಿರುವ ಕಿಂಗ್ಸ್​ಮೀಡ್​ ಕ್ರಿಕೆಟ್​ ಮೈದಾನದಲ್ಲಿ ಅತಿಥೇಯರ ವಿರುದ್ಧ ನಡೆಯಬೇಕಿದ್ದ ಮೊದಲ ಪಂದ್ಯವನ್ನು ರದ್ದು ಮಾಡಲಾಗಿದೆ.

    ಮಳೆ ಎಡೆಬಿಡದೆ ನಿರಂತರವಾಗಿ ಸುರಿದ ಪರಿಣಾಮ ಸರಣಿಯ ಮೊದಲ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ.

    ಇದನ್ನೂ ಓದಿ: ಮದ್ಯಪ್ರದೇಶ ಸಿಎಂ ಆಯ್ಕೆ ಬಿಕ್ಕಟ್ಟು; ಸೋಮವಾರ ತೆರೆಬೀಳುವ ಸಾಧ್ಯತೆ!

    ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದು, ದಕ್ಷಿಣ ಆಫ್ರಿಕಾದ ನಾಯಕತ್ವವನ್ನು ಏಡೆನ್ ಮಾರ್ಕ್ರಾಮ್ ವಹಿಸಿಕೊಂಡಿದ್ದಾರೆ. ಎರಡನೇ ಟಿ20 ಪಂದ್ಯ ಡಿಸೆಂಬರ್ 12ರಂದು ಗ್ಕೆಬರ್ಹಾದಲ್ಲಿ ನಡೆಯಲಿದೆ.

    ವಿಶ್ವಾಸದಲ್ಲಿ ಭಾರತ

    ಇತ್ತೀಚಿಗೆ ಏಕದಿನ ವಿಶ್ವಚಾಂಪಿಯನ್ನರ ವಿರುದ್ಧ ನಡೆದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಹರಿಣಗಳ ವಿರುದ್ದ ಕಣಕ್ಕಿಳಿದಿರುವ ಯುವ ತಂಡವು ಆತ್ಮವಿಶ್ವಾಸದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧವೂ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts