More

    ಭಾರತರತ್ನದ ಗೌರವ ಹೆಚ್ಚಳ

    ತೀರ್ಥಹಳ್ಳಿ: ಬಿಜೆಪಿಯ ಪರಮೋಚ್ಚ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ಭಾರತರತ್ನ ದೊರೆತಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಸುದ್ದಿಗಾರರ ಜತೆ ಮಾತನಾಡಿ, ರಥಯಾತ್ರೆ ಎಂಬ ಶಬ್ದಕ್ಕೆ ಮತ್ತೊಂದು ಹೆಸರೇ ಆಡ್ವಾಣಿ. ಪಕ್ಷದ ಸಂಘಟನೆಗಾಗಿ ನಾಲ್ಕು ರಥಯಾತ್ರೆಗಳ ಮೂಲಕ ದೇಶದ ಮೂಲೆ ಮೂಲೆಗೆ ತೆರಳಿದ ವೇಳೆ ಸಿಕ್ಕಿರುವ ಜನಮನ್ನಣೆಯಿಂದಾಗಿ ಹಲವು ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದಿತು. ನೂರಾರು ಮಂದಿ ಶಾಸಕರು, ಸಂಸದರಾಗಿದ್ದಾರೆ ಎಂದು ಬಣ್ಣಿಸಿದರು.
    ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಅತ್ಯಂತ ವೈಭವದ ದಿನಗಳನ್ನು ನೋಡುವುದಕ್ಕೆ ಆಡ್ವಾಣಿ ಅವರ ರಥಯಾತ್ರೆಗಳ ಪ್ರಭಾವವೇ ಕಾರಣ. ಅವರ ಬದುಕು ಮತ್ತು ಜೀವನಶೈಲಿ ಮಾದರಿ. ರಾಮಮಂದಿರ ಪ್ರತಿಷ್ಠಾಪನೆಯಲ್ಲೂ ಅವರ ಪಾತ್ರ ನಿರ್ಣಾಯಕವಾಗಿತ್ತು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts