ಅಂಕೋಲಾ: ಔಷಧ ಮತ್ತು ಆಹಾರ ಉತ್ಪನ್ನ ತಯಾರಿಕೆಯಲ್ಲಿ ದೇಶಿಯ ಉತ್ಪಾದನೆಗಳ ಮೂಲಕ ಹೆಸರುವಾಸಿಯಾದ ಪತಂಜಲಿ ಸಂಸ್ಥೆಯ ನೂತನ ಆರೋಗ್ಯ ಕೇಂದ್ರ ಮತ್ತು ಸ್ಟೋರ್ಸ್ ಪಟ್ಟಣದ ಶಾಂತಾದುರ್ಗಾ ದೇವಸ್ಥಾನ ಹತ್ತಿರ ಮಂಗಳವಾರ ಶುಭಾರಂಭಗೊಂಡಿದೆ.
ಪತಂಜಲಿ ಸಂಸ್ಥೆಯ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್ಲಾಲ್ ಆರ್ಯಾ ಉದ್ಘಾಟಿಸಿದರು. ಜಿಲ್ಲಾ ಪ್ರಭಾರಿ ಶ್ರೀನಾಥ, ತಾಲೂಕು ಪ್ರಭಾರಿ ವಿನಾಯಕ ಗುಡಿಗಾರ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಲ್ಹಾದ್, ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಸದಸ್ಯ ಜಯಪ್ರಕಾಶ ನಾಯ್ಕ, ತಾಪಂ ಇಒ ಪಿ.ವೈ. ಸಾವಂತ, ಸಂಪ್ರದಾಯ ಸೇವಾ ಸಂಸ್ಥೆ ಅಧ್ಯಕ್ಷ ಅನುಪ ನಾಯಕ, ಸುಭಾಶ ನಾರ್ವೆಕರ್, ಪಂಡಿತ ಆಸ್ಪತ್ರೆ ವೈದ್ಯ ವಿಜಯದೀಪ್, ಸ್ಟೋರ್ಸ್ ಮಾಲೀಕ ಸಮರ್ಥ ವೇರ್ಣಿಕರ್ ಉಪಸ್ಥಿತರಿದ್ದರು.