More

    ಪಂಚವಟಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಇಂದಿನಿಂದ

    ಮುರಗೋಡ: ಶ್ರೀ ಮಹಾಂತ ದುರದುಂಡೀಶ್ವರ ಮಠದ ಪೀಠಾಧಿಕಾರಿ ಶ್ರೀ ನೀಲಕಂಠ ಸ್ವಾಮೀಜಿ ಷಷ್ಟೃಬ್ದಿ ಕನಸಿನ ಯೋಜನೆಗಳಾದ ಕಾರಿಮನಿ-ಸೊಗಲ ನಿಸರ್ಗ ಧಾಮದ ಪಂಚವಟಿ ಕಲ್ಯಾಣ ಕೇಂದ್ರದಲ್ಲಿ ಮಹಾಂತ ಶಿವಯೋಗಿಗಳ ಶಿಲಾಮೂರ್ತಿ ಪ್ರತಿಷ್ಠಾಪನೆ, ಮಹಾಂತ ಧ್ಯಾನ ಮಂದಿರದ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿಶೇಷ ಪ್ರವಚನ ಕಾರ್ಯಕ್ರಮಗಳು ನೀಲಕಂಠ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜನವರಿ 1ರಿಂದ ಆರಂಭಗೊಳ್ಳಲಿದೆ.

    ಕಾರಿಮನಿ ಸೊಗಲ ಪಂಚವಟಿ ಕಲ್ಯಾಣ ಕೇಂದ್ರದಲ್ಲಿ ಜ.1ರಂದು ಸಂಜೆ 6 ಗಂಟೆಗೆ ಪ್ರವಚನ ಉದ್ಘಾಟನೆ ಹಾಗೂ ಅಲ್ಲಮ ಪ್ರಭುಗಳ ಜೀವನದರ್ಶನ ಪ್ರವಚನ ಕಾರ್ಯಕ್ರಮ ಜರುಗಲಿದೆ. ಜ.2ರಂದು ಸಂಜೆ 6 ಗಂಟೆಗೆ ವಿಶ್ವಗುರು ಬಸವಣ್ಣವರ ಹಾಗೂ ಶರಣರ ಜೀವನ ದರ್ಶನ ಪ್ರವಚನ, ಜ.3ರಂದು ಸಂಜೆ 6 ಗಂಟೆಗೆ ಮಡಿವಾಳ ಮಾಚಿದೇವರ ಜೀವನ ದರ್ಶನ ಪ್ರವಚನ, ಜ.4ರಂದು ಗರಗದ ಮಡಿವಾಳೇಶ್ವರ ಶಿವಯೋಗಿಗಳ ಜೀವನ ದರ್ಶನ ಪ್ರವಚನ, ಜ.5ರಂದು ಸಂಜೆ 6 ಗಂಟೆಗೆ ಶಿದ್ದಲಿಂಗೇಶ್ವರ ಜೀವನ ದರ್ಶನ ಪ್ರವಚನ ಜರುಗಲಿದೆ.

    ಜ.6ರಂದು ಹಾನಗಲ್ಲ ಕುಮಾರ ಸ್ವಾಮೀಜಿ ಜೀವನ ದರ್ಶನ ಪ್ರವಚನ, ಜ.7ರಂದು ಗೋಮಾತೆ ಹಾಗೂ ಕಷಿ ವಿಚಾರ ಸಂಕೀರ್ಣಗೋಷ್ಠಿ, ಜ.8ರಂದು ಬೆಳಗ್ಗೆ ಮಹಾಂತ ಶಿವಯೋಗಿಗಳ ಶೀಲಾಮೂರ್ತಿ ಶಿವಯೋಗಿ ಧ್ಯಾನಮಂದಿರದ ಪ್ರತಿಷ್ಠಾಪನೆ, 11 ಗಂಟೆಗೆ ಶಿವಧ್ಯಾನ ಮಂದಿರದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ. ಹೊಸಪೇಟ-ಬಳ್ಳಾರಿ ಅನ್ನದಾನೇಶ್ವರ ಮಠದ ಜಗದ್ಗುರು ಮುಪ್ಪನ ಬಸವಲಿಂಗ ಸ್ವಾಮೀಜಿ ಅಮತ ಹಸ್ತದಿಂದ ಉದ್ಘಾಟನೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts