More

    ನಿಡಸೋಸಿಯಲ್ಲಿ ಗೋಮಯ ಕಾರ್ತಿಕೋತ್ಸವ

    ಸಂಕೇಶ್ವರ: ಸಮೀಪದ ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠದಲ್ಲಿ ಸೋಮವಾರ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಗೋಮಯ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

    ಪ್ರತಿ ವರ್ಷ ಶ್ರೀಮಠದ ಭಕ್ತರು ಮೇಣದ ಬತ್ತಿ ಹಚ್ಚಿ ಕಾರ್ತಿಕೋತ್ಸವ ಆಚರಿಸುತ್ತಿದ್ದರು. ಆದರೆ, ಈ ಬಾರಿ ಗೋವಿನ ಉತ್ಪನ್ನಗಳ ಮೂಲಕ ತಯಾರಿಸಿದ ಹಣತೆ ಹಾಗೂ ಹೂವು ಅಲಂಕಾರದ ಮೂಲಕ ವಿಶೇಷವಾಗಿ ಕಾರ್ತಿಕೋತ್ಸವ ಆಚರಿಸಲಾಯಿತು. ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇಶಿ ಉತ್ಪನ್ನಗಳ ಜತೆಗೆ ವೈಜ್ಞಾನಿಕ ತಳಹದಿಯ ಮೇಲೆ ಗೋಮಯ ಕಾರ್ತಿಕೋತ್ಸವ ಆಚರಿಸಲಾಗುತ್ತಿದೆ. ರಾಸಾಯನಿಕ ಮುಕ್ತ ವೈಜ್ಞಾನಿಕ ಆಧಾರದಲ್ಲಿ ಕಾರ್ತಿಕೋತ್ಸವ ಆಚರಿಸುವ ಮೂಲಕ ಶ್ರೀಮಠ ಗೋಹತ್ಯೆ ನಿಷೇಧ ವಿಧೇಯಕ ಬೆಂಬಲಿಸಲಿದೆ ಎಂದರು. ಸಂಜಯ ಪಾಟೀಲ, ಬಸವರಾಜ ಅಂಬಲಿ, ಅಣ್ಣಪ್ಪ ಮಗದುಮ್ಮ, ನಿಜಲಿಂಗ ಅಂಬಲಿ, ಕೆದಾರಿ ಮಾಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts