ಇಳಕಲ್ಲ(ಗ್ರಾ): ತಾನು ಪ್ರೀತಿಸಿದ ಯುವತಿ ಜತೆಗೆ ತನ್ನ ಮದುವೆ ಆಗುತ್ತಿಲ್ಲ ಎಂದು ಬೇಜಾರುಗೊಂಡ ಯುವಕನೊಬ್ಬ ಸಮೀಪದ ಬಲಕುಂದಿ ತಾಂಡೆಯಲ್ಲಿ ಭಾನುವಾರ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ. ಗಣೇಶ ರಾಠೋಡ (22) ಮೃತ ಯುವಕ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಬಿ.ವಿ. ನ್ಯಾಮಗೌಡ ತನಿಖೆ ನಡೆಸಿದ್ದಾರೆ.