ಚೆನ್ನೈ: ತಮ್ಮದೇ ಒಂದು ಪಕ್ಷ ಕಟ್ಟಿಕೊಂಡು ರಾಜಕಾರಣಕ್ಕೆ ಇಳಿದಿರುವ ನಟ ಕಮಲಹಾಸನ್ ಇದೀಗ ರಾಜಕೀಯ ಚಟುವಟಿಕೆಗಳಲ್ಲಿ ಚುರುಕಾಗಿದ್ದು, ಯಾವುದೇ ಕಾರಣಕ್ಕೂ ರಾಜಕಾರಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಜತೆಜತೆಗೆ ಮಕ್ಕಳ್ ನೀತಿ ಮಯಮ್ (ಎಂಎನ್ಎಂ) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಕಮಲಹಾಸನ್, ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕೆಲವರು ನಾನು ರಾಜಕೀಯದಿಂದ ಕಾಣೆಯಾಗಿ ಮತ್ತೆ ಸಿನಿಮಾಗೆ ಪ್ರವೇಶಿಸುತ್ತೇನೆ ಎಂಬುದಾಗಿ ವ್ಯಂಗ್ಯವಾಡುತ್ತಿದ್ದಾರೆ. ಆದರೆ ನಾನು ರಾಜಕೀಯದಿಂದ ಕಾಣೆಯಾಗುತ್ತೇನೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಜನತೆ ಎಂದಿರುವ ಕಮಲಹಾಸನ್, ತಮ್ಮ ರಾಜಕೀಯ ಜೀವನಕ್ಕೆ ತೊಂದರೆ ಆಗುವುದಿದ್ದರೆ ನಾನು ಸಿನಿಮಾ ಜೀವನಕ್ಕೇ ವಿದಾಯ ಹೇಳಿ ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬುದಾಗಿಯೂ ಹೇಳಿದ್ದಾರೆ. ಸದ್ಯಕ್ಕೆ ಬಾಕಿ ಇರುವ ಎಲ್ಲ ಸಿನಿಮಾಗಳನ್ನು ಮುಗಿಸಲಿದ್ದೇನೆ. ಆ ನಂತರ ರಾಜಕೀಯಕ್ಕೆ ಸಿನಿಮಾ ಅಡ್ಡಿ ಆಗುವುದಾದರೆ ಸಿನಿಮಾಜೀವನಕ್ಕೇ ವಿದಾಯ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ನೀವು ಸಿಎಂ ಆಗೋದಾದ್ರೆ ಜೆಡಿಎಸ್ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್.ಡಿ. ರೇವಣ್ಣ ಕೊಟ್ರು ಆಫರ್
ಇನ್ನು ತಾವು ರಾಜಕೀಯಕ್ಕೆ ಪ್ರವೇಶಿಸಿರುವುದು ಐತಿಹಾಸಿಕ ನಿರ್ಧಾರ. ಏಕೆಂದರೆ ಶೇ. 30 ಮಂದಿ ರಾಜಕೀಯದಿಂದ ದೂರವೇ ಉಳಿದಿರುವಾಗ ತಮ್ಮ ಈ ನಿರ್ಧಾರ ಸೂಕ್ತವಾದದ್ದು ಎಂದು ಕಮಲಹಾಸನ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮಗೆ ಕೆಲವು ಬೆದರಿಕೆಗಳು ಬರುತ್ತಿವೆ ಎಂದಿರುವ ಅವರು, ಆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ, ಇಬ್ಬರು ಗಂಡಂದಿರ ಸಾವು!
ಸಾರಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕೆಲವು ಮದ್ಯಪ್ರಿಯರಿಗೆ ಖುಷಿಯೋ ಖುಷಿ!
ರಾಜ್ಯದಲ್ಲಿ ಮತ್ತೊಂದು ಬ್ಲಾಸ್ಟ್: ಸ್ಫೋಟಕ ಸಾಮಗ್ರಿ ಸಿಡಿದು ಇಬ್ಬರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ…