More

    ರೈ ನಾನೇ ಮಾಡುತ್ತೇನೆ; ‘ಎಂಆರ್’ ಚಿತ್ರ ಕೈಬಿಡುವಂತೆ ಪದ್ಮನಾಭ್ ಆಗ್ರಹ

    ಬೆಂಗಳೂರು: ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ರವಿ ಶ್ರೀವತ್ಸ, ‘ಎಂಆರ್’ ಎಂಬ ಚಿತ್ರವನ್ನು ಇತ್ತೀಚೆಗಷ್ಟೇ ಶುರು ಮಾಡಿದ್ದಾರೆ. ಈ ಮಧ್ಯೆ, ಮುತ್ತಪ್ಪ ರೈ ಕುರಿತ ಚಿತ್ರವನ್ನು ತಾವೇ ಮಾಡುವುದಾಗಿ ‘ಕಾಲೇಜ್ ಕುಮಾರ್’ ಮುಂತಾದ ಚಿತ್ರಗಳನ್ನು ನಿರ್ವಿುಸಿರುವ ಪದ್ಮನಾಭ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಎಂಆರ್’ ಚಿತ್ರವನ್ನು ಕೈಬಿಡುವಂತೆ ರವಿ ಶ್ರೀವತ್ಸ ಮತ್ತು ನಿರ್ಮಾಪಕ ರಾಜಣ್ಣ ಅವರಿಗೂ ಸೂಚಿಸಿದ್ದಾರೆ.

    ರೈ ನಾನೇ ಮಾಡುತ್ತೇನೆ; ‘ಎಂಆರ್’ ಚಿತ್ರ ಕೈಬಿಡುವಂತೆ ಪದ್ಮನಾಭ್ ಆಗ್ರಹ
    ಪದ್ಮನಾಭ

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ನಾನು ಎಂಆರ್ ಪಿಕ್ಚರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದೇ ಮುತ್ತಪ್ಪ ರೈ ಅವರ ಬಯೋಪಿಕ್ ನಿರ್ವಿುಸುವುದಕ್ಕೆ. ಆ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ನಿರ್ವಿುಸುವ ಆಸೆ ಇದೆ. ಆದರೆ, ಕಾರಣಾಂತರಗಳಿಂದ ಚಿತ್ರ ಮಾಡಲಾಗಲಿಲ್ಲ. ಈ ಮಧ್ಯೆ, ರವಿ ಶ್ರೀವತ್ಸ ಅವರು ಮುತ್ತಪ್ಪ ರೈ ಕುರಿತ ಸಿನಿಮಾದ ಮುಹೂರ್ತ ಮಾಡಿದ್ದಾರೆ. ನಾನು ದೇಶದಲ್ಲಿರಲಿಲ್ಲ. ಹಾಗಾಗಿ ಅವರು ಸಿನಿಮಾ ಮಾಡುತ್ತಿರುವುದು ಗೊತ್ತಾಗಲಿಲ್ಲ. ಇದೀಗ ನಾನು ವಾಪಸ್ಸು ಬಂದಿದ್ದು, ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಕರೆಸಿ ಮಾತನಾಡಿದ್ದೇನೆ. ಸಿನಿಮಾ ಕೈಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ’ ಎನ್ನುತ್ತಾರೆ ಪದ್ಮನಾಭ್. ಈ ಕುರಿತು ‘ಎಂಆರ್’ ನಿರ್ದೇಶಕ ರವಿ ಶ್ರೀವತ್ಸರನ್ನು ಕೇಳಿದರೆ, ತಮಗೇನೂ ಗೊತ್ತಿಲ್ಲ ಎನ್ನುತ್ತಾರೆ. ಲೊಕೇಶನ್ ನೋಡುವುದಕ್ಕೆ ಸದ್ಯದಲ್ಲೇ ಮುಂಬೈಗೆ ಹೋಗುವುದಾಗಿ ಹೇಳುತ್ತಾರೆ.

    ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

    ಓ ಪುರುಷರೇ.. ನಿಮಗಿದು ಬ್ಯಾಡ್ ನ್ಯೂಸ್​!; ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಕರೊನಾ ಸೋಂಕಿತರಾಗದಂತೆ ಎಚ್ಚರ ವಹಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts