More

    ಶ್ರೀರಾಮುಲುನೇ ನಮಗೆ ಉಸ್ತುವಾರಿ ಸಚಿವ, ಆನಂದ್ ಸಿಂಗ್ ಬಗ್ಗೆ ಗೊತ್ತಿಲ್ಲ: ಸೋಮಶೇಖರ ರಡ್ಡಿ

    ಬಳ್ಳಾರಿ: ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಎದುರಿಸಲಿದ್ದೇವೆ. ಹೀಗಾಗಿ ಸರ್ಕಾರ ಉಸ್ತುವಾರಿ ಬದಲಿಸದಿದ್ದರೂ ಶ್ರೀರಾಮುಲು ಅವರೇ ನಮಗೆ ಜಿಲ್ಲಾ ಉಸ್ತುವಾರಿ ಸಚಿವ ಇದ್ದಂತೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರಡ್ಡಿ ಹೇಳಿದ್ದಾರೆ.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ ಸಿಂಗ್ ಅವರನ್ನು ಉಸ್ತುವಾರಿ ಬದಲಿಸುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದೇವು. ಆದರೆ, ಸರ್ಕಾರ ಬದಲಿಸಿಲ್ಲ. ಹೀಗಾಗಿ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಚುನಾವಣೆಯನ್ನ ಈಗಾಗಲೇ ಎದುರಿಸುತ್ತಿದ್ದು, ಅವರೇ ನಮಗೆ ಉಸ್ತುವಾರಿ ಸಚಿವರು ಎಂದರು.

    2001 ರಲ್ಲಿ ನಗರಸಭೆ ಇದ್ದಾಗ ಬಿಜೆಪಿ ಆಡಳಿತದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಅಲ್ಲದೆ, 2007 ರಲ್ಲಿ ಮಹಾನಗರ ಪಾಲಿಕೆಗೆ ಇದ್ದಾಗ ಬಿಜೆಪಿ 30 ಸೀಟ್ ಗೆದ್ದಿತ್ತು. ಆ ಸಮಯದಲ್ಲಿ ರೆಡ್ಡಿ- ರಾಮುಲು ಜೋಡಿಯಿಂದ ನಗರದಲ್ಲಿ ಉತ್ತಮ ಕಾರ್ಯಗಳಾಗಿದ್ದವು ಎಂದರು.

    ಅದಾದ ಬಳಿಕ ಬಿಜೆಪಿ ಪಕ್ಷಕ್ಕೆ ಪಾಲಿಕೆಯಲ್ಲಿ ಅಧಿಕಾರ ಸಿಕ್ಕಿಲ್ಲ. ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸವಿದೆ.
    ಶ್ರೀ ರಾಮುಲು ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರ ಅಭಿಪ್ರಾಯ ಪಡೆದು ಟಿಕೇಟ್ ನೀಡಲಾಗುವುದು.
    ಬಿಜೆಪಿಗೆ ಮತ ಹಾಕಿದರೇ ಅಭಿವೃದ್ಧಿಯಾಗಲಿದೆ ಎಂಬುದು ಜನರ ಅಭಿಮತವಾಗಿದೆ ಎಂದರು. (ವಿಜಯವಾಣಿ, ಬಳ್ಳಾರಿ).

    ಸಚಿವ ಬಿ.ಸಿ ಪಾಟೀಲ್​ಗೆ ಮನೆಯಲ್ಲೇ ಕರೊನಾ ಲಸಿಕೆ ಪ್ರಕರಣ: ತಾಲೂಕು ವೈದ್ಯಾಧಿಕಾರಿ ಅಮಾನತು!

    ತೆಲಗು ದೇಶಂ ಪಕ್ಷ ಬಿಜೆಪಿಯಲ್ಲಿ ವಿಲೀನವಾಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts