More

    ನಾನು ಆರ್​ಸಿಬಿಯ ನಿಷ್ಠಾವಂತ ಅಭಿಮಾನಿ ಆದರೆ… ಇಕ್ಕಟ್ಟಿಗೆ ಸಿಲುಕಿದ ರಶ್ಮಿಕಾ ಮಂದಣ್ಣ!

    ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕಿರುವ ಕ್ರೇಜ್​ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್​ಸಿಬಿಗೆ ಇರುವ ಕ್ರೇಜ್​ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್​ ನಟಿ ವರ್ಷಾ ಬೊಲ್ಲಮ್ಮಾ ತಾನು ಆರ್​ಸಿಬಿ ಫ್ಯಾನ್​ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಒಂದು ಬಾರಿಯಾದರೂ ಆರ್​ಸಿಬಿ ಕಪ್​ ಗೆಲ್ಲಬೇಕು ಎಂದರು. ಇದೀಗ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕೂಡ ತಾನು ಆರ್​ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

    ದಕ್ಷಿಣ ಭಾರತದ ಬಹು ಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣಗೆ ಕ್ರಿಕೆಟ್​ ಮೇಲೆಯೂ ಬಹಳ ಆಸಕ್ತಿ ಇದೆ. ಸದ್ಯ ರಶ್ಮಿಕಾ ಅವರು ದಿ ಗರ್ಲ್​ಫ್ರೆಂಡ್​ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಖ್ಯಾತ ಗಾಯಕಿ ಚಿನ್ಮಯಿ ಅವರ ಪತಿ ರಾಹುಲ್​ ರವಿಂದ್ರನ್​ ಅವರು ನಿರ್ದೇಶಿಸುತ್ತಿದ್ದಾರೆ.

    ಸನ್​ರೈಸರ್ಸ್​ ಹೈದರಾಬಾದ್​ ಆಡುವಾಗ ನಿಮಗೆ ಶೂಟಿಂಗ್​ ಇದೆಯೇ ಎಂಬುದನ್ನು ಖಚಿತಪಡಿಸಿ ಎಂದು ನೆಟ್ಟಿಗರೊಬ್ಬರು ರಾಹುಲ್​ ರವಿಂದ್ರನ್​ರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ರವೀಂದ್ರನ್​, ದಿ ಗರ್ಲ್​ಫ್ರೆಂಡ್​ ಶೆಡ್ಯೂಲ್ ನಿನ್ನೆಯೇ​ ಮುಕ್ತಾಯವಾಗಿದೆ. ಇಂದಿಗೆ ರಶ್ಮಿಕಾ ಡೇಟ್ಸ್​ ನಮಗೆ ಇಲ್ಲ ಕ್ಷಮಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ರಾಹುಲ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ. ಆದರೆ, ಇಂದಿನ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ಗೆಲ್ಲಲಿ ಎಂದು ಆಶಿಸುತ್ತೇನೆ. ಇಂದು ಪಂದ್ಯ ಗೆದ್ದರೆ ಅದು ಅದ್ಭುತ, ಗೆಲ್ಲದೇ ಹೋದರೆ ಮುಂದಿನ ಪಂದ್ಯವನ್ನು ಪಕ್ಕಾ ಗೆಲ್ಲಲಿದ್ದಾರೆ. ಸ್ಕೈಪ್​ ಮೂಲಕ ಕನಿಷ್ಟ ಪಕ್ಷ ಒಂದು ಶಾಟ್​ ಆದ್ರೂ ಶೂಟ್​ ಮಾಡೋಣ. ಆದರೆ, ಆರ್​​ಸಿಬಿ ಮತ್ತು ಎಸ್​ಆರ್​ಎಚ್​ ಪಂದ್ಯ ಇರುವಾಗ ನಾವು ಏನು ಮಾಡಬೇಕೆಂದು ಆಶ್ಚರ್ಯ ಪಡುತ್ತಿದ್ದೇನೆ ಎನ್ನುವ ಮೂಲಕ ರಶ್ಮಿಕಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆರ್​ಸಿಬಿ vs ಎಸ್​ಆರ್​ಎಚ್​ ಪಂದ್ಯದ ವೇಳೆ ಯಾರನ್ನು ಬೆಂಬಲಿಸಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ, ರಶ್ಮಿಕಾ ಯಾರನ್ನೂ ಬೆಂಬಲಿಸುವುದು ಅಂತಾ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಇಂದು ಗುಜರಾತಿನ ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡ ಸೋಲನ್ನು ಅನುಭವಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಎಸ್​ಆರ್​ಎಚ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 ರನ್​ ಗಳಿಸಿತು. ಗುರಿ ಬೆನ್ನತ್ತಿದ ಗುಜರಾತ್​ ಟೈಟಾನ್ಸ್​ 19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 168 ರನ್​ ಗಳಿಸುವ ಮೂಲಕ 7 ವಿಕೆಟ್​ಗಳ ಜಯ ಸಾಧಿಸಿತು. (ಏಜೆನ್ಸೀಸ್​)

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಕೊನೆಯವರೆಗೂ ಡೇನಿಯಲ್​ ಬಾಲಾಜಿ ಮದುವೆಯಾಗಲಿಲ್ಲ ಏಕೆ? ಇಲ್ಲಿದೆ ಅಸಲಿ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts