ಹೂವಿನಹಡಗಲಿ: ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಭಾನುವಾರ ಶಾಸಕ ಪಿ.ಟಿ.ಪರಮೇಶ್ವರನಾಯ್ಕಗೆ ಮನವಿ ಸಲ್ಲಿಸಿತು.
ಕರೊನಾದಿಂದ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು, ಕೂಡಲೇ ಬಾಕಿ ವೇತನ ಸರ್ಕಾರ ನೀಡಬೇಕು. ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯ ನೆಪದಲ್ಲಿ ಅತಿಥಿ ಉಪನ್ಯಾಸಕರನ್ನು ಕೈಬಿಡುವ ಮಾತು ಕೇಳಿ ಬರುತ್ತಿದೆ. ಹಾಗೆ ಮಾಡದೆ ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಎಐಡಿವೈಒ ಸಂಘಟನೆ ತಾಲೂಕು ಸಂಚಾಲಕ ಉಮೇಶ, ಅತಿಥಿ ಉಪನ್ಯಾಸಕರಾದ ಬಡಿಗೇರ ಶಿವಾನಂದ, ಮಹೇಶ ಭಟ್, ಸಂಪತ್, ಎ.ಕೆ.ನಾಗರಾಜ್, ರಾಕೇಶ, ನಾಗವೇಣಿ, ಶರಿಂತಾಜ್ ಇದ್ದರು.