ಲಖನೌ: ಅಕ್ರಮ ಸಂಬಂಧಗಳಿಂದಾಗಿ ಆಗುವ ಅನಾಹುತಗಳ ಬಗ್ಗೆ ಪ್ರತಿನಿತ್ಯ ಹತ್ತಾರು ಸುದ್ದಿಗಳು ಬರುತ್ತಿದ್ದರೂ ಅಂತಹ ತಪ್ಪನ್ನು ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಗಂಡ ಮನೆಯಲ್ಲಿಲ್ಲವೆಂದು ಪ್ರಿಯಕರನನ್ನು ಮನೆಗೇ ಕರೆಸಿಕೊಂಡ ಮಹಿಳೆಯೊಬ್ಬಳಿಂದ ಇದೀಗ ನಾಲ್ಕು ಜನರು ಜೈಲು ಪಾಲಾಗುವಂತಾಗಿದೆ.
ಉತ್ತರ ಪ್ರದೇಶದ ಖಾನ್ಪುರದ ರಸೂಲಾಬಾದ್ ಕೊಟ್ವಾಲಿ ಪ್ರದೇಶದ ನರ್ ಖಾಸ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಾಮ್ಬಾಬು ಹೆಸರಿನ ವ್ಯಕ್ತಿಯ ಹೆಂಡತಿ ಬದನ್ಸಿಂಗ್ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಒಂದು ದಿನ ರಾಮ್ಬಾಬು ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದಾನೆ. ರಾತ್ರಿ ಮನೆಗೆ ಆತ ಮರಳುವುದಿಲ್ಲ ಎಂದು ತಿಳಿದ ಆತನ ಪತ್ನಿ ಬದನ್ಸಿಂಗ್ಗೆ ಕರೆ ಮಾಡಿ ರಾತ್ರಿ ಮನೆಗೆ ಬರಲು ಹೇಳಿದ್ದಾಳೆ. ಅದರಂತೆ ಆತ ಮನೆಗೆ ಬಂದಿದ್ದು, ಇಬ್ಬರು ತಮ್ಮದೇ ಲೋಕದಲ್ಲಿ ಮೈ ಮರೆತಿದ್ದಾರೆ.
ಆದರೆ ಕೆಲಸಕ್ಕೆ ಹೋಗಿದ್ದ ರಾಮ್ ಬಾಬು ರಾತ್ರಿಯೇ ಮನೆಗೆ ವಾಪಾಸಗಿದ್ದಾನೆ. ಆಗ ಹೆಂಡತಿ ಬೇರೊಬ್ಬ ಗಂಡಸಿನೊಂದಿಗಿರುವುದನ್ನು ಕಂಡು ಸಿಟ್ಟಿಗೆದ್ದು ಮಾಡಬಾರದ ನಿರ್ಧಾರ ಮಾಡಿಬಿಟ್ಟಿದ್ದಾನೆ. ತಮ್ಮ ಶ್ಯಾಮ್ಬಾಬು ಜತೆ ಸೇರಿ ಬದನ್ ಸಿಂಗ್ನ ತಲೆಗೆ ಇಟ್ಟಿಗೆಯಿಂದ ಬಲವಾಗಿ ಕುಟ್ಟಿ ಕೊಲೆ ಮಾಡಿದ್ದಾರೆ. ಆತ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ವಿಚಾರ ಪೊಲೀಸರಿಗೆ ತಲುಪಿದ್ದು, ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
1.1 ಲಕ್ಷ ರೂಪಾಯಿಯ ಆ್ಯಪಲ್ ಐಫೋನ್ ಆರ್ಡರ್ ಮಾಡಿದವಳಿಗೆ ಬಂದಿದ್ದು ಆ್ಯಪಲ್ ಜ್ಯೂಸ್!