ಹುಬ್ಬಳ್ಳಿ: ಪತ್ನಿಯ ಅನೈತಿಕ ಸಂಬಂಧ ಪ್ರಶ್ನಿಸಲು ಹೋದ ಪತಿಯ ಮೇಲೆ ಆಕೆಯ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೇಶವಾಪುರದ ಮುಕ್ತಿಧಾಮದ ಬಳಿ ನಡೆದಿದೆ.
ಸಂತೋಷ್ ತೀವ್ರವಾಗಿ ಗಾಯಗೊಂಡ ವ್ಯಕ್ತಿ. ಈತನ ಪತ್ನಿ ರೂಪಾದೇವಿ ಸನ್ನಿ ಎಂಬುವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ವಿಷಯ ಗೊತ್ತಾಗಿ ಪ್ರಶ್ನಿಸಲು ಹೋದ ಸಂತೋಷ್ ಮೇಲೆ ಸನ್ನಿ ನಾಯಿಯನ್ನು ಛೂ ಬಿಟ್ಟಿದ್ದಲ್ಲದೆ, ಚಾಕುವಿನಿಂದ ತೀವ್ರ ಹಲ್ಲೆ ನಡೆಸಿದ್ದಾನೆ.
ಸಂತೋಷ್ನ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಪ್ಪಿಸಲು ಹೋದ ಆತನ ಕುಟುಂಬದವರ ಮೇಲೆ ಕೂಡ ಹಲ್ಲೆ ನಡೆದಿದೆ. ಇವರೆಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.
ರೂಪಾದೇವಿ ಜತೆ ಸನ್ನಿ ಅನೈತಿಕ ಸಂಬಂಧ ಹೊಂದಿದ್ದನ್ನು ಸಂತೋಷ್ ತಂದೆ ನೋಡಿದ್ದರು. ಇದನ್ನು ಪ್ರಶ್ನಿಸಲು ಹೋದಾಗಲೇ ಈ ಹಲ್ಲೆ ನಡೆದಿದೆ. ಸದ್ಯ ರೂಪಾದೇವಿಯೂ ಮನೆ ಬಿಟ್ಟು ಹೋಗಿದ್ದಾಳೆ.