More

    ಸದಾಶಿವ ಆಯೋಗ ವರದಿ ಜಾರಿಗೊಳಿಸಿ

    ಹುನಗುಂದ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಕ್ಷಣವೇ ಜಾರಿಗೊಳಿಸುವಂತೆ ಒತ್ತಾಯಿಸಿ ಹುನಗುಂದ ಮತ್ತು ಇಳಕಲ್ಲ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಶುಕ್ರವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.

    ರವೀಂದ್ರ ಹೊಸಮನಿ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು 2012 ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಸದಾಶಿವ ವರದಿಯನ್ನು ಜಾರಿಗೆ ತರಲು ಮೀನಮೇಷ ಎನ್ನಿಸುತ್ತಿವೆ. ಇದು ಮಾದಿಗ ಸಮಾಜಕ್ಕೆ ಮಾಡುತ್ತಿರುವ ಬಹುದೊಡ್ಡ ಮೋಸ ಎಂದರು.

    ಸಮಿತಿ ಮುಖಂಡ ರಾಘು ಬಿಸನಾಳ, ಶಾಂತು ಮೂಕಿ, ಸತ್ಯಪ್ಪ ದಳವಾಯಿ, ರವಿ ಮಾದರ, ಹನುಮಂತ ನಡುವಿನಮನಿ, ಶಾಂತಪ್ಪ ಮಸ್ಕಿ, ತಿಪ್ಪಣ್ಣ ಇಲಕಲ್ಲ, ಮಾರುತಿ ಭಾವಿಕಟ್ಟಿ, ಕೆಂಚಪ್ಪ ಪೂಜಾರಿ, ಅರವಿಂದ ರಾಜಾಪುರ, ಅಶೋಕ ಮುಂಡೇವಾಡಿ, ಅರವಿಂದ ರಾಜಾಪುರ, ಗಂಗಾಧರ ಮಾದರ, ಪರಶುರಾಮ ರತ್ನಾಕರ ಸೇರಿ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts