ಹುಬ್ಬಳ್ಳಿ: ಕೊನೆಗೂ ಹುಬ್ಬಳ್ಳಿ ಗಲಭೆಯ ರೂವಾರಿ ಮೌಲ್ವಿ ವಾಸಿಂ ಪಠಾಣ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸಂಜೆ ಸುಮಾರು 4ಗಂಟೆಗೆ ಬಂಧಿಸಿರುವ ಪೊಲೀಸರು ಮೌಲ್ವಿಯನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಸಿಡಿಪಿಗಳಾದ ಸಾಹಿಲ್ ಬಾಗ್ಲಾ ಹಾಗೂ ಗೋಪಾಲ ಬ್ಯಾಕೋಡ್ ಅವರಿಂದ ಸುಧೀರ್ಘ ವಿಚಾರಣೆ ನಡೆಸಲಾಗುತ್ತಿದೆ.
ಗಲಭೆಯ ದಿನ ರಾತ್ರಿ ನಡೆದ ಘಟನೆ, ಹಾಗೂ ಅಲ್ಲಿ ಸೇರಿದ್ದ ಜನರ ಬಗ್ಗೆ ಮಾಹಿತ ಕಲೆ ಹಾಕುತ್ತಿದ್ದಾರೆ. ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.