More

    300 ಕೋಟಿಗೂ ಅಧಿಕ ನಗದು ಪತ್ತೆಯಾದ ಬಳಿಕ ಬಚ್ಚಿಟ್ಟ ಚಿನ್ನದ ಶೋಧಕ್ಕೆ ಟೆಕ್ನಾಲಜಿ ಬಳಕೆ!

    ನವದೆಹಲಿ/ರಾಂಚಿ: ಕಾಂಗ್ರೆಸ್​​ ಸಂಸದ ಧೀರಜ್​ ಕುಮಾರ್​ ಸಾಹು ಕುಟುಂಬದ ಒಡೆತನದಲ್ಲಿರುವ ಒಡಿಶಾ ಮೂಲದ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ ಬರೋಬ್ಬರಿ 353.5 ಕೋಟಿ ರೂಪಾಯಿ ಪತ್ತೆಯಾದ ಸುದ್ದಿ ಇಡೀ ದೇಶದ ಜನತೆಯನ್ನು ದಿಗ್ಭ್ರಮೆಗೊಳಿಸಿದೆ.

    ದೇಶದ ಐಟಿ ದಾಳಿ ಇತಿಹಾಸದಲ್ಲಿ ಒಂದೇ ಒಂದು ಕಾರ್ಯಾಚರಣೆಯಲ್ಲಿ ಇಷ್ಟೊಂದು ಅಕ್ರಮ ನಗದನ್ನು ಮೊದಲ ಬಾರಿ ವಶಪಡಿಸಿಕೊಳ್ಳಲಾಗಿದೆ. ನೋಟು ಎಣಿಸಲು ಒಂದು ವಾರ ಸಮಯವನ್ನೇ ತೆಗೆದುಕೊಂಡಿತು. ಭಾರಿ ಹಣ ವಶಪಡಿಸಿಕೊಂಡ ಬಳಿಕ ಇದೀಗ ಆದಾಯ ತೆರಿಗೆ ಇಲಾಖೆ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದು, ಧೀರಜ್​ ಸಾಹು ಮನೆ ಅಥವಾ ಕಚೇರಿ ಆವರಣದಲ್ಲಿ ನೆಲದಡಿಯಲ್ಲಿ ಮರೆ ಮಾಡಿರಬಹುದಾದ ಚಿನ್ನವನ್ನು ಹುಡುಕಲು ಹೈಟೆಕ್​ ಗಾಡ್ಜೆಟ್​ಗಳನ್ನು ಬಳಸಲಾಗುತ್ತಿದೆ.

    ಐಟಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಐಟಿ ತಂಡಗಳು ಜಿಯೋ ಸರ್ವಿಲೆನ್ಸ್​ ಸಿಸ್ಟಮ್​ ಬಳಸುತ್ತಿವೆ. ಈ ಸಿಸ್ಟಮ್​ ನೆಲದ ಕೆಳಗೆ ಅಡಗಿರುವ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್​ನ ರಾಂಚಿ ಮತ್ತು ಲೋಹರ್ದಗಾದಲ್ಲಿರುವ ಧೀರಜ್​ ಸಾಹುಗೆ ಸಂಬಂಧಿಸಿದ ಎರಡು ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತದೆ.

    ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್​ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಡಿ. 6ರಂದು ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಭಾರೀ ಹಗರಣವೇ ಬಯಲಾಯಿತು. ಸಂಸದ ಧೀರಜ್ ಸಾಹು ಅವರು ಒಡಿಶಾದ ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾಯಾಯಿತು. ಉಳಿದ ಹಣವನ್ನು ತಿತ್ಲಗಢ, ಸಂಬಲ್ಪುರ್ ಮತ್ತು ರಾಂಚಿಯಲ್ಲಿ ವಶಕ್ಕೆ ಪಡೆಯಲಾಯಿತು. ಕಚೇರಿಯ ಒಂಬತ್ತು ಕಪಾಟುಗಳಲ್ಲಿ 500, 200 ಮತ್ತು 100 ರೂಪಾಯಿ ನೋಟುಗಳ ಬಂಡಲ್​ಗಳನ್ನು ಇರಿಸಲಾಗಿತ್ತು. ಎಲ್ಲ ಹಣವನ್ನು ಎಣಿಸಲು ಒಂದು ವಾರದ ಸಮಯ ತೆಗೆದುಕೊಂಡಿತು. ಸುಮಾರು 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ನೋಟು ಎಣಿಸಲು ಬಳಸಲಾಯಿತು. ಬ್ಯಾಂಕ್​ ಸಿಬ್ಬಂದಿ ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿ ನೋಟು ಎಣಿಸಲು ನಿಯೋಜಿಸಲಾಗಿತ್ತು.

    ಬಿಜೆಪಿ ವಾಗ್ದಾಳಿ
    ಭ್ರಷ್ಟಾಚಾರದ ವಿಷಯವಾಗಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ದೇಶವಾಸಿಗಳು ಕನಿಷ್ಠ ಈ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕತೆ ಬಗ್ಗೆ ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಇದು ಮೋದಿಯವರ ಗ್ಯಾರಂಟಿ ಎಂದು ತಿಳಿಸಿದ್ದಾರೆ. ಅಲ್ಲದೆ, ಒಡಿಶಾದ ಆಡಳಿತಾರೂಢ ಬಿಜೆಡಿ ಕೂಡ ಐಟಿ ದಾಳಿಯನ್ನು ಸ್ವಾಗತಿಸಿದೆ.

    ಧೀರಜ್ ಸಾಹು ಅವರು ಕಾಂಗ್ರೆಸ್​ನ ಹಿರಿಯ ಸಂಸದರಾಗಿದ್ದು, ನನಗೆ ದೊರೆತ ಮಾಹಿತಿಯಂತೆ 290 ಕೋಟಿ ರೂ.ನಗದು ಎಣಿಕೆ ಮಾಡಲಾಗಿದೆ, 8 ಲಾಕರ್​ಗಳು ಮತ್ತು 10 ಕೊಠಡಿಗಳನ್ನು ತೆರೆಯಬೇಕಿದೆ. ಈ ಸಂಖ್ಯೆ 500 ಕೋಟಿಗೆ ಏರಿದರೆ ನನಗೆ ಆಶ್ಚರ್ಯವಿಲ್ಲ, 500 ಕೋಟಿ ರೂಪಾಯಿ ನಗದು ಮಾತ್ರ, ಆಗ ಆಸ್ತಿ 1,000 ಕೋಟಿ ರೂಪಾಯಿ ಆಗಬಹುದು, ಕಾಂಗ್ರೆಸ್ ಈ ದೇಶದ ಆರ್ಥಿಕತೆಯನ್ನು ಟೊಳ್ಳು ಮಾಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಆರೋಪ ಮಾಡಿದ್ದಾರೆ.

    ವಸೂಲಿ ಮಾಡಿದ ಹಣ ಒಬ್ಬರಿಗೆ ಮಾತ್ರ ಸೇರಿದ್ದಲ್ಲ, ಭಾರತ್ ಜೋಡೋ ಯಾತ್ರೆಯಲ್ಲಿ ಧೀರಜ್ ಸಾಹು ಹೇಗೆ ಭಾಗವಹಿಸಿದ್ದರು ಎಂಬುದನ್ನು ನೀವು ನೋಡಿರಬಹುದು. ರಾಹುಲ್ ಗಾಂಧಿ ಜೊತೆಗಿನ ಹಲವಾರು ಫೋಟೋಗಳು ವೈರಲ್ ಆಗಿವೆ. ಈ ಹಣ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅಥವಾ ಜಾರ್ಖಂಡ್ ಸರ್ಕಾರಕ್ಕೆ ಸೇರಿರಬಹುದು. ಆದರೆ, ಪ್ರಧಾನಿ ಮೋದಿ ಅವರು ಭಾನುವಾರ ಹೇಳಿದಂತೆ ಪ್ರತಿ ಪೈಸೆಯೂ ಎಣಿಕೆಯಾಗುತ್ತದೆ ಮತ್ತು ಕಾಂಗ್ರೆಸ್‌ನ ಎಲ್ಲಾ ಭ್ರಷ್ಟ ನಾಯಕರು ಕಂಬಿ ಹಿಂದೆ ಹೋಗುತ್ತಾರೆ ಎಂದರು.

    ಧೀರಜ್ ಸಾಹು ಯಾರು?
    ಜಾರ್ಖಂಡ್​ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು ಕಾಂಗ್ರೆಸ್​ನ ಹಿರಿಯ ನಾಯಕ. 1977ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಧೀರಜ್ ಮೂರನೇ ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಅವರು 2010-2016ರ ಅವಧಿಯಲ್ಲಿ ಕಾಂಗ್ರೆಸ್​ನ ರಾಜ್ಯಸಭಾ ಸಂಸದರಾಗಿದ್ದರು. 2018ರಲ್ಲಿ ಅವರು ಜಾರ್ಖಂಡ್​ನಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಗೆದ್ದರು. ಸಾಹು ಅವರು 2003-05ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು. (ಏಜೆನ್ಸೀಸ್​)

    ಹಳೆಯ ಹಾಸಿಗೆಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಹೋಗಿ 68 ಲಕ್ಷ ರೂ.ಪಂಗನಾಮ ಹಾಕಿಸಿಕೊಂಡ ಬೆಂಗಳೂರು ಟೆಕ್ಕಿ

    ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂತೆಗೆತ ಪ್ರಕರಣ: ನಿಲುವಳಿ ಸೂಚನೆ ಮಂಡನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಪಟ್ಟು

    ಕನ್ನಡದ ಬಿಗ್​ಬಾಸ್​ ಶೋಗೆ ಎಂಟ್ರಿ ಕೊಡ್ತಾರಾ ಶೋಭಾ? ಈ ಸ್ಪರ್ಧಿಗೆ ಕೌಂಟರ್​ ಕೊಡಲು ಬೇಕೆ ಬೇಕಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts