ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಸರಿನ ಇಸ್ಲಾಮಿಕ್ ಸಂಘಟನೆ ಅನೇಕರಿಗೆ ಸಾಕಷ್ಟು ಹಣವನ್ನು ಸಂದಾಯ ಮಾಡಿದೆ ಎಂಬ ಆತಂಕಕಾರಿ ವಿಷಯವನ್ನು ಜೀ ನ್ಯೂಸ್ ವರದಿ ಮಾಡಿದೆ.
ಹಣ ಪಡೆದ ಫಲಾನುಭವಿಗಳಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್, ದುಶ್ಯಂತ್ ಎ ದೇವ್ ಮತ್ತು ಅಬ್ದುಲ್ ಸಮಂದ್ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಒಟ್ಟು 120 ಕೋಟಿ ರೂ. ಮೌಲ್ಯದ ಬ್ಯಾಂಕ್ ವಹಿವಾಟು ಪಿಎಫ್ಐನ 73 ಬ್ಯಾಂಕ್ ಖಾತೆಗಳಿಂದ ನಡೆದಿದೆ. ಇದರಲ್ಲಿ ಕಪಿಲ್ ಸಿಬಲ್ಗೆ 77 ಲಕ್ಷ ರೂ, ಜೈಸಿಂಗ್ 4 ಲಕ್ಷ ರೂ., ದುಶ್ಯಂತ್ ಎ ದೇವ್ 11 ಲಕ್ಷ ರೂ. ಮತ್ತು ಅಬ್ದುಲ್ ಸಮಂದ್ 3.10 ಲಕ್ಷ ರೂ. ಹಣ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೆ, ನ್ಯೂ ಜೋತಿ ಗ್ರೂಪ್ಗೆ 1.17 ಕೋಟಿ ರೂ. ಮತ್ತು ಪಿಎಫ್ಐ ಕಾಶ್ಮೀರಕ್ಕೆ 1.65 ಕೋಟಿ ರೂ. ಸಂದಾಯವಾಗಿದೆ ಎನ್ನಲಾಗಿದೆ.
ಪಿಎಫ್ಐಗೆ ಸಂಬಂಧಿಸಿದ 73 ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಒಟ್ಟಾರೆ ಬ್ಯಾಂಕ್ ವ್ಯವಹಾರವನ್ನು ಪರೀಕ್ಷಿಸಿದಾಗ ಒಟ್ಟು 120.5 ಕೋಟಿ ರೂ. ಈ ಖಾತೆಗಳಲ್ಲಿ ಸಂದಾಯವಾಗಿದ್ದು, ಅದೇ ದಿನ ಅಥವಾ ಎರಡು ಮೂರು ದಿನದೊಳಗೆ ಖಾತೆಗಳಲ್ಲಿ ಕನಿಷ್ಠ ನಗದು ಉಳಿತಾಯ ಮಾಡಿ ಹಣವನ್ನು ಹಿಂಪಡೆದಿರುವುದು ಬೆಳಕಿಗೆ ಬಂದಿದೆ.
ಪಿಎಫ್ಐನ(10) ಮತ್ತು ರೆಹಬ್ ಇಂಡಿಯಾ(5) ಸೇರಿ ಒಟ್ಟು 15 ಬ್ಯಾಂಕ್ಗಳಲ್ಲಿ 1.04 ಕೋಟಿ ರೂ. ಹಣವನ್ನು ಡಿಸೆಂಬರ್ 4, 2019ರಿಂದ ಜನವರಿ 6 2020ರವರೆಗೆ ಜಮಾವನೆ ಮಾಡಲಾಗಿದೆ. ಈ ಹಣವನ್ನು ಮೊಬೈಲ್ ಬಳಸಿ ಐಎಂಪಿಎಸ್ ಮೂಲಕ ಜಮಾವಣೆ ಮಾಡಲಾಗಿದೆ. ಜಮಾವಣೆ ಮಾಡುವವರ ಗುರುತನ್ನು ಬಹಿರಂಗ ಪಡಿಸದೇ 50 ಸಾವಿರ ರೂ. ಕೆಳಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಸಿಎಎ ವಿರುದ್ಧ ಪ್ರತಿಭಟನೆಗೆ ನಿಧಿಯನ್ನು ನೀಡಲು ಪಿಎಫ್ಐನ 9 ಕಚೇರಿಗಳು ಮತ್ತು ಸಂಬಂಧಿತ ಸಂಘಟನೆಗಳು ದೆಹಲಿಯ ಶಾಹೀನ್ ಬಾಘ್ ಏರಿಯಾದಲ್ಲಿ ತೆರೆದಿವೆ ಎಂಬ ಭಯಾನಕ ಮಾಹಿತಿಯನ್ನು ಕೂಡ ಮೂಲಗಳು ತಿಳಿಸಿವೆ. (ಏಜೆನ್ಸೀಸ್)