ತಿರುಪತಿ: ಕಾಲೇಜು ಹಾಸ್ಟೆಲ್ನಲ್ಲಿ ಒಂದರ ಹಿಂದೊಂದರಂತೆ ಸಾವು ಸಂಭವಿಸಿರುವ ಪ್ರಕರಣ ನಡೆದಿದೆ. ಅದರಲ್ಲೂ ಸತ್ತವನೊಬ್ಬನನ್ನು ಕಂಡೇ ಇನ್ನೊಬ್ಬ ಸಾವಿಗೀಡಾದ ಪ್ರಸಂಗ ನಡೆದಿದೆ. ಆಂಧ್ರಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಿರುಪತಿ ಜಿಲ್ಲೆಯ ಗುಡೂರು ಎಂಬಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದೆ. ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಧರಣೇಶ್ವರ ರೆಡ್ಡಿ (20) ಎಂಬಾತನ ಶವ ನೋಡಿ ವಾರ್ಡನ್ ಶ್ರೀನಿವಾಸುಲು ನಾಯ್ಡು (54) ಸಾವಿಗೀಡಾಗಿದ್ದಾನೆ.
ವೈಎಸ್ಆರ್ ಕಡಪ ಜಿಲ್ಲೆಯ ಮೂಲದ ಧರಣೇಶ್ ರೆಡ್ಡಿ ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಎಸ್ಇ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಹಾಸ್ಟೆಲ್ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ಗೊತ್ತಾಗಿ ಕಾಲೇಜು ಪ್ರಾಂಶುಪಾಲ, ಸಿಬ್ಬಂದಿ ಹಾಗೂ ಹಾಸ್ಟೆಲ್ ವಾರ್ಡನ್ ಜೊತೆಯಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಗೆ ಧಾವಿಸಿದ್ದರು. ಆಗ ವಾರ್ಡನ್ ಶವ ನೋಡಿ ಆಘಾತಗೊಂಡು ಕುಸಿದುಬಿದ್ದ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಸಾವಿಗೀಡಾಗಿದ್ದ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
‘ಉತ್ತಮ ವಿಲನ್’: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!