ಹಾವೇರಿ: ರಾಜ್ಯದಲ್ಲಿ ಇಂದು ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಹೊರವಲಯದಲ್ಲಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ಒಳಗಾದ ಕಾರುಗಳ ಪೈಕಿ ಒಂದು ಗುಜರಾತ್ ಮೂಲದ್ದಾಗಿದ್ದು, ಇನ್ನೊಂದು ಕೇರಳ ಮೂಲದ್ದಾಗಿದೆ. ಎರಡೂ ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು ಗುಜರಾತ್ನ ಕಾರಿನಲ್ಲಿದ್ದ ಮೂವರು ಹಾಗೂ ಕೇರಳದ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗುಜರಾತ್ ಮೂಲದ ದಿನೇಶ್ (38), ಲತೀಶ್ (37), ಸುರೇಶ್ (39) ಮತ್ತು ಕೇರಳ ಮೂಲದ ಸಾಹಲ್ (37) ವರ್ಷ ಮೃತಪಟ್ಟವರು.
ಈ ಅಪಘಾತದಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಗಳುಗಳನ್ನು ರಾಣೆಬೆನ್ನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ್, ಎಎಸ್ಪಿ ವಿಜಯಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಬಾಲಿವುಡ್ ಸ್ಟಾರ್ಗಳಿಗೆ ಸವಾಲೆಸೆದ ರಾಮ್ಗೋಪಾಲ್ ವರ್ಮಾ; ಭಾರತೀಯ ಚಿತ್ರರಂಗಕ್ಕೇ ಹೀಗೊಂದು ಪ್ರಪೋಸಲ್ ಇಟ್ರು!