ವಿಜಯಪುರ: ಮನೆಯಲ್ಲಿ ನಾನೊಬ್ಬಳೇ ಕೆಲಸ ಮಾಡಬೇಕು, ನೀನು ಮಾಡುತ್ತಿಲ್ಲ. ಎಷ್ಟು ಅಂತ ಮನೆ ಕೆಲಸ ಮಾಡೋದು? ನನಗೂ ಸಾಕುಸಾಕಾಗಿದೆ, ಬೆಳಗ್ಗೆ ಎದ್ದಾಗಿನಿಂದ ಮಾಡುತ್ತಲೇ ಇರುವೆ… ನೀವು ಸ್ವಲ್ಪ ಸಹಾಯ ಮಾಡಬಾರದೆ… ಈ ಮಾತು ಪ್ರತಿಯೊಬ್ಬರ ಮನೆಯಲ್ಲಿ ಪದೇಪದೆ ಕೇಳುಬರುತ್ತಲೇ ಇರುತ್ತೆ. ಇದು ಸಹಜ ಪ್ರಕ್ರಿಯೆ ಕೂಡ.
ಆದರೆ ಇಲ್ಲೊಂದು ಮನೆಯಲ್ಲಿ ಕೆಲಸ ಮಾಡೋ ವಿಚಾರವಾಗಿ ಪತಿ-ಪತ್ನಿ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಿಟ್ಟಿಗೆದ್ದ ಪತಿರಾಯ, ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಇದನ್ನೂ ಓದಿರಿ ತೊಗರಿ ಒಕ್ಕಣೆ ಮಾಡುತ್ತಿದ್ದ ಮಹಿಳೆ ಮಷಿನ್ಗೆ ಸಿಲುಕಿ ಸಾವು!
ಇಂತದ ದುರ್ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸಂಭವಿಸಿದೆ. ನಾಗಮ್ಮ(60) ಕೊಲೆಯಾದ ದುರ್ದೈವಿ. ಪತಿ ಯಲ್ಲಪ್ಪ(65) ಆರೋಪಿ.
ಸ್ಥಳಕ್ಕೆ ಭೇಟಿ ನೀಡಿದ ಬಸವನ ಬಾಗೇವಾಡಿ ಸಿಪಿಐ ಸೋಮಶೇಖರ್ ಜುಟ್ಟಲ್ ಹಾಗೂ ಪೊಲೀಸ್ ಸಿಬ್ಬಂದಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದರು.
ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ನದಿ ದಡದಲ್ಲಿ ಸಿಕ್ಕ ಬೈಕ್, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್!