ರಾಯಬಾಗ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ರಂಗಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಂಗಿನಾಟ ರಂಗೇರಿತು.
ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಎಲ್ಲ ಸಮುದಾಯದ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು ಬಣ್ಣದಾಟ ಆಡಿ ರಂಗಪಂಚಮಿ ಹಬ್ಬಕ್ಕೆ ಮೆರುಗು ತಂದರು. ದೊಡ್ಡ ನೀರಿನ ಬ್ಯಾರಲ್ಗಳಲ್ಲಿ ಬಣ್ಣದ ನೀರನ್ನು ತುಂಬಿದ ಯುವಕರ ಗುಂಪು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಪಟ್ಟರು.
ಕೆಲವು ಮಕ್ಕಳು ಪಿಚಕಾರಿ ಹಿಡಿದು ಬಣ್ಣದ ಎರಚಿ, ಸ್ನೇಹಿತರ ಮುಖಕ್ಕೆ ಬಣ್ಣ ಹಾಕಿ ಖುಷಿಪಟ್ಟರು. ಪಟ್ಟಣದಲ್ಲಿ ರಂಗಪಂಚಮಿ ಹಬ್ಬ ಇದ್ದರಿಂದ ಶಾಲಾ- ಕಾಲೇಜುಗಳು, ಕಚೇರಿಗಳು ಮಧ್ಯಾಹ್ನದ ವರೆಗೆ ಮುಚ್ಚಿದ್ದವು. ಬಸ್ ಸಂಚಾರ ವಿರಳವಾಗಿತ್ತು. ವ್ಯಾಪರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು.