More

    ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ

    ಬೈಂದೂರು: ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ವೈಭವದಿಂದ ನಡೆಯಿತು. ಆಗಮ ವಿದ್ಯಾವಾರಧಿ ಕಟ್ಟೆ ಶಂಕರ್ ಭಟ್ಟರ ಆಚಾರ್ಯತ್ವದಲ್ಲಿ ಬೆಳಗ್ಗೆ ಪ್ರಾತಃಕಾಲ ಪೂಜೆ, ನಿತ್ಯಬಲಿ, ರಥಶುದ್ಧಿ ಹೋಮ, ಶತರುದ್ರಾಭಿಷೇಕ ರಥಬಲಿ, ಕ್ಷೇತ್ರಪಾಲ ಬಲಿ, ರಥಾರೋಹಣ, ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

    ಸಂಜೆ ವಿವಿಧ ಟ್ಯಾಬ್ಲೋಗಳ ಮೂಲಕ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ದೇವಸ್ಥಾನ ಆಡಳಿತ ಮೊಕ್ತೇಸರ ಅಧ್ಯಕ್ಷ ಎಚ್.ಪದ್ಮನಾಭ ಮೇರ್ಟ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎಚ್.ಜಯಶೀಲ ಎನ್.ಶೆಟ್ಟಿ, ಖಜಾಂಚಿ ಎಚ್.ವಿಜಯ್ ಶೆಟ್ಟಿ, ಸಮಿತಿ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮುಂದಿನ ವರ್ಷದ ಜಾತ್ರೆ ಒಳಗೆ ಭವ್ಯ ರಾಜಗೋಪುರ ಮತ್ತು ದೇವಸ್ಥಾನದ ಪೌಳಿ ಲೋಕಾರ್ಪಣೆ ಮಾಡಲಿದ್ದೇವೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಎಚ್.ಜಯಶೀಲ ಎನ್.ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts