More

    ಬಸ್ರೂರಿನಲ್ಲಿ ತೀವ್ರ ಗಾಳಿಮಳೆಗೆ ಮನೆಗೆ ಮರ ಬಿದ್ದು ಇಬ್ಬರಿಗೆ ಗಾಯ

    ಕುಂದಾಪುರ: ಬಸ್ರೂರಿನಲ್ಲಿ ಗುರುವಾರ ಗಾಳಿ ಮಳೆಗೆ ಮನೆಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಣಪಯ್ಯ ಗಾಣಿಗ ಎಂಬುವರ ಮನೆ ಮೇಲೆ ತೆಂಗು ಹಾಗೂ ಅಡಕೆ ಮರ ಬಿದ್ದು, ವಾರಿಜಾ ಹಾಗೂ ಎಂಕಮ್ಮ ಎಂಬುವರು ಗಾಯಗೊಂಡಿದ್ದಾರೆ. ವಾರಿಜಾ ಅವರ ತಲೆಗೆ ಗಂಭೀರ ಗಾಯವಾಗಿದೆ. ಇಬ್ಬರನ್ನೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತೆಕ್ಕಟ್ಟೆ ಗ್ರಾಮದಲ್ಲಿ ಇರುವ ದೇವಸ್ಥಾನದ ವಿಶ್ರಾಂತಿ ಕೊಠಡಿ ಮೇಲ್ಮಾಡು ಹಾರಿ ಹೋಗಿದೆ. ಘಟ್ಟದಲ್ಲಿ ಮಳೆ ಹೆಚ್ಚಿದ್ದು, ಸೌಪರ್ಣಿಕಾ, ಚಕ್ರಾ, ವರಾಹಿ, ಕುಬ್ಜ, ಖೇಟಕಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ನದಿಯಲ್ಲಿ ನೀರು ಹೆಚ್ಚಾಗಿ ಸಾಲ್ಬುಡ, ಹಡವು, ಬಡಾಕೆರೆ, ಕಟ್ಟು, ಉಪ್ಪಿನಕುದ್ರು ತಗ್ಗು ಪ್ರದೇಶಕ್ಕೆ ನೆರೆ ಭೀತಿ ತೋರಿದೆ.

    ಯಾಡ್ಯಾಡಿ ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿ ಮರ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಯವಾಯಿತು. ಸ್ಥಳೀಯರು ಮರ ತೆರವು ಮಾಡಿದರು.

    ಮಾಲಾಡಿ ಬ್ರಹ್ಮಲಿಂಗೇಶ್ವರ ಹಾಗೂ ನಂದಿಕೇಶ್ವರ ಪರಿವಾರ ದೈವಸ್ಥಾನದ ಗುಡಿಯ ವಿಶ್ರಾಂತಿ ಕೊಠಡಿ ತಗಡಿನ ಮಾಡು ಸಂಪೂರ್ಣ ಕಿತ್ತು ಹೋಗಿದೆ. ನಸುಕಿನ ವೇಳೆಯಾದ್ದರಿಂದ ಜನರ ಓಡಾಟವಿಲ್ಲದ ಹಿನ್ನೆಲೆ ಅನಾಹುತ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts