More

    ರೈತರ ನೆರವಿಗೆ ಧಾವಿಸಿದ ಎಚ್​ಡಿಕೆ: ನಷ್ಟಕ್ಕೊಳಗಾದ ರೈತರಿಗೆ ತಲಾ 55 ಸಾವಿರ ರೂ. ಪರಿಹಾರ

    ಮಂಡ್ಯ: ಮಳೆಯಿಂದ ಕೆರೆ ಕೋಡಿ ಬಿದ್ದು ಭತ್ತದ ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನ ನೆರವಿಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಧಾವಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದ ಗೌರಿಶಂಕರ್ ಎಂಬ ರೈತನ 1.5 ಎಕರೆಯಷ್ಟು ಭತ್ತದ ಬೆಳೆ ನಷ್ಟವಾಗಿತ್ತು. ಇದಾದ ಬಳಿಕ ಬೆಳೆ ನಾಶದ ಕುರಿತು ರೈತ ಗೌರಿಶಂಕರ್​ ಫೇಸ್​ಬುಕ್​ನಲ್ಲಿ ವಿಡಿಯೋ ಮೂಲಕ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ.

    ರೈತನ ವಿಡಿಯೋ ಗಮನಿಸಿದ ಮಾಜಿ ಸಿಎಂ ಎಚ್​​ಡಿಕೆ ಇಂದು ಬೊಪ್ಪ ಸಮುದ್ರ ಗ್ರಾಮಕ್ಕೆ ಭೇಟಿ ಕೊಟ್ಟು ರೈತ ಗೌರಿಶಂಕರ್ ಸೇರಿದಂತೆ ನಷ್ಟಕ್ಕೊಳಗಾಗಿದ್ದ ಮೂವರು ರೈತರಿಗೆ ತಲಾ 55 ಸಾವಿರ ರೂ. ಪರಿಹಾರ ನೀಡಿದ್ದಾರೆ. ಪರಿಹಾರ ನೀಡಿದ ಎಚ್ಡಿಕೆಗೆ ರೈತರು ಧನ್ಯವಾದ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸುಮಲತಾರಿಂದ ಹೆಸರು ಪ್ರಸ್ತಾಪ: ಪಾಪ ಪ್ರಜ್ವಲ್ ನನಗೆ ಪೋನ್ ಮಾಡಿದ್ದ ಅಂದ್ರು ಎಚ್​.ಡಿ. ರೇವಣ್ಣ

    ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್​, ಚಾಕು…

    ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts