ಮಂಡ್ಯ: ಮಳೆಯಿಂದ ಕೆರೆ ಕೋಡಿ ಬಿದ್ದು ಭತ್ತದ ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತನ ನೆರವಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಧಾವಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದ ಗೌರಿಶಂಕರ್ ಎಂಬ ರೈತನ 1.5 ಎಕರೆಯಷ್ಟು ಭತ್ತದ ಬೆಳೆ ನಷ್ಟವಾಗಿತ್ತು. ಇದಾದ ಬಳಿಕ ಬೆಳೆ ನಾಶದ ಕುರಿತು ರೈತ ಗೌರಿಶಂಕರ್ ಫೇಸ್ಬುಕ್ನಲ್ಲಿ ವಿಡಿಯೋ ಮೂಲಕ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದ.
ರೈತನ ವಿಡಿಯೋ ಗಮನಿಸಿದ ಮಾಜಿ ಸಿಎಂ ಎಚ್ಡಿಕೆ ಇಂದು ಬೊಪ್ಪ ಸಮುದ್ರ ಗ್ರಾಮಕ್ಕೆ ಭೇಟಿ ಕೊಟ್ಟು ರೈತ ಗೌರಿಶಂಕರ್ ಸೇರಿದಂತೆ ನಷ್ಟಕ್ಕೊಳಗಾಗಿದ್ದ ಮೂವರು ರೈತರಿಗೆ ತಲಾ 55 ಸಾವಿರ ರೂ. ಪರಿಹಾರ ನೀಡಿದ್ದಾರೆ. ಪರಿಹಾರ ನೀಡಿದ ಎಚ್ಡಿಕೆಗೆ ರೈತರು ಧನ್ಯವಾದ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)
ಸುಮಲತಾರಿಂದ ಹೆಸರು ಪ್ರಸ್ತಾಪ: ಪಾಪ ಪ್ರಜ್ವಲ್ ನನಗೆ ಪೋನ್ ಮಾಡಿದ್ದ ಅಂದ್ರು ಎಚ್.ಡಿ. ರೇವಣ್ಣ
ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್, ಚಾಕು…
ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ